ವಿಷ್ಣು ಸರ್ಕಲ್ ವೀರಕೇಸರಿ ಬಳಗದ ಸ್ಥಬ್ಧ ಚಿತ್ರದ ಆಮಂತ್ರಣ ಬಿಡುಗಡೆ

0

ಸುಳ್ಯದ ದಸರಾ ಉತ್ಸವದ ಶೋಭಾಯಾತ್ರೆಗೆ ವೀರ ಕೇಸರಿ ವಿಷ್ಣು ಸರ್ಕಲ್ ಬಳಗದ 19 ನೇ ವರ್ಷದ ಸ್ಥಬ್ಧ ಚಿತ್ರ ಹಾಗೂ ಸಿಡಿ ಮದ್ದು ಪ್ರದರ್ಶನವು ಮೆರುಗು ನೀಡಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಇಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯಿತು.

ಸ್ಥಳೀಯ ಪ್ರಮುಖರಾದ ಬಾಲರಾಜ್ ದೇಂಗೋಡಿ ಯವರು ಆಮಂತ್ರಣ ಪತ್ರಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಗೋಕುಲ್ ದಾಸ್, ನಾರಾಯಣ ಕೇಕಡ್ಕ, ರಾಜು ಪಂಡಿತ್, ಅನಿಲ್ ಕೆ.ಸಿಪರಿವಾರಕಾನ, ಚಂದ್ರಶೇಖರ ಪಂಡಿತ್,
ಸತೀಶ್ ಎಂ.ಕೆ, ದೀಪಕ್ ವಿಷ್ಣು ಸರ್ಕಲ್, ಪ್ರದೀಪ್ ವಿಷ್ಣು ಸರ್ಕಲ್, ಸಂದೇಶ್ ಕಾಯರ್ತೋಡಿ, ಮೋಹನದಾಸ್ ಪಂಜ ಹಾಗೂ ಮತ್ತಿತರರು ಉಪಸ್ಥಿತರಿದ್ದರು.