ನಿವೃತ್ತ ಹವಾಲ್ದಾರ್ ಕೃಷ್ಣಪ್ರಸಾದ ಕೂಜುಗೋಡು ನಿಧನ

0

ಐನೆಕಿದು ಗ್ರಾಮದ ನಿವಾಸಿ, ನಿವೃತ್ತ ಸೈನಿಕ ಕೃಷ್ಣಪ್ರಸಾದ ಕೂಜುಗೋಡು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರು ಆಸ್ಪತ್ರೆ ಯಲ್ಲಿ ಅ.13 ರಂದು ನಿಧನರಾಗಿದ್ದರು.ಅವರಿಗೆ 44 ವರ್ಷ ವಯಸ್ಸಾಗಿತ್ತು.


ಭಾರತೀಯ ಸೇನೆಯಲ್ಲಿ ಸುಮಾರು 23 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇಂದು ಐನೆಕಿದು ಶಾಲಾ ಬಳಿಯಿಂದ ಪಾರ್ಥೀವ ಶರೀರವನ್ನು ಮೆರವಣಿಗೆಯಲ್ಲಿ ತರಲಾಯಿತು. ನಿವೃತ್ತ ಸೈನಿಕರ ಸಂಘ ಕಡಬ ವತಿಯಿಂದ ಅ‌ಂತಿಮ ಗೌರವ ಸಲ್ಲಿಕೆಯ ಬಳಿಕ ಅಂತ್ಯ ಸಂಸ್ಕಾರ ನಡೆಸಲಾಯಿತು.


ನಿವೃತ್ತ ಸೈನಿಕರ ಸಂಘದ ಜಿಲ್ಲಾ ಅಧ್ಯಕ್ಷ ಜೆ.ಪಿ.ಎಂ ಚೆರಿಯನ್, ನಿವೃತ್ತ ಸೈನಿಕರ ಸಂಘ ಕಡಬದ ಅಧ್ಯಕ್ಷ ಸೈಮನ್ ಜೆ.ಸಿ, ಉಪಾಧ್ಯಕ್ಷ ಮ್ಯಾಥ್ಯೂ , ಸದಸ್ಯರು ಭಾಗವಹಿಸಿದ್ದರು.