ಫೋಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ, ಗ್ರಾ.ಪಂ ಸದಸ್ಯ ದಿವಾಕರ ಮುಂಡಾಜೆ ನಿಧನ ಹಿನ್ನೆಲೆ

0

ಹರಿಹರ ಪೇಟೆಯ ಅಂಗಡಿ ಮುಚ್ಚಿ ಶೋಕಾಚರಣೆ: ಟ್ಯಾಕ್ಸಿ, ಅಟೋ, ಜೀಪ್,ಪಿಕಪ್ ಸೇವೆ ಅಲಭ್ಯ

ತಾಲ್ಲೂಕಿನಾದ್ಯಂತ ಸ್ಟುಡಿಯೋ ಬಂದ್

ಇಂದು ಸಂಜೆ ಅಂತ್ಯಸಂಸ್ಕಾರ

ಹರಿಹರ ಪಲ್ಲತಡ್ಕದಲ್ಲಿ ಪತ್ರಿಕಾ ವಿತರಕ ಹಾಗೂ ಛಾಯಾಗ್ರಾಹಕರಾಗಿರುವ, ಹರಿಹರ ಪಲ್ಲತಡ್ಕ ಗ್ರಾ.ಪಂ. ಸದಸ್ಯ ಹಾಗೂ ಸುಳ್ಯ ವಲಯ ಫೋಟೊಗ್ರಾಫರ್ಸ್ ಅಸೋಸಿಯೇಶನ್ ಅಧ್ಯಕ್ಷ ದಿವಾಕರ ಮುಂಡಾಜೆಯವರು ಇಂದು ಬೆಳಿಗ್ಗೆ ತೀವ್ರ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದು, ಈ ಹಿನ್ನೆಲೆಯಲ್ಲಿ ಹರಿಹರ ಪೇಟೆಯ ವರ್ತಕರು ಒಂದು ಗಂಟೆ ವರೆಗೆ ಅಂಗಡಿ ಮುಚ್ಚಿ ಶೋಕಾಚರಣೆ ನಡೆಸಲಿದ್ದಾರೆ. ಟ್ಯಾಕ್ಸಿ, ಅಟೋ, ಜೀಪ್, ಪಿಕಪ್ ಚಾಲಕರು ಕೂಡ ಸೇವೆ ಸ್ಥಗಿತಗೊಳಿಸಿ ಶೋಕಾಚರಣೆ ಮಾಡಿದ್ದಾರೆ. ಸುಳ್ಯ ತಾಲ್ಲೂಕಿನಾದ್ಯಂತ, ಕಡಬ ಸುಬ್ರಹ್ಮಣ್ಯ, ಏನೆಕಲ್ಲು, ಎಡಮಂಗಲದ ಸ್ಟುಡಿಯೋಗಳವರು ಇಂದು ಬಂದ್ ಮಾಡಿದ್ದಾರೆ.

ದಿವಾಕರ ಮುಂಡಾಜೆಯವರ ಹಿರಿಯ ಮಗಳು ಬೆಂಗಳೂರಲ್ಲಿ ಉದ್ಯೋಗದಲ್ಲಿದ್ದು, ಅವರು ಅಲ್ಲಿಂದ ಊರಿಗೆ ಹೊರಟಿದ್ದಾರೆ. ಆದ್ದರಿಂದ ಇಂದು ಸಂಜೆ ಗಂಟೆ 5 ಗಂಟೆ ಸುಮಾರಿಗೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿದು ಬಂದಿದೆ.