ದೇವರಕೊಲ್ಲಿ: ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದ ಕಾರು

0

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮವಾಗಿ ಕೇರಳದ ಕಾಞಂಗಾಡ್ ಮೂಲದ ನಾಲ್ವರು ಪ್ರಯಾಣಿಕರು ಗಾಯಗೊಂಡ ಘಟನೆ ಮದೆ ಗ್ರಾಮದ ದೇವರಕೊಲ್ಲಿಯಲ್ಲಿ ಅ.17ರಂದು ಬೆಳಿಗ್ಗೆ ಸಂಭವಿಸಿದೆ.

ಸಂಪಾಜೆ ರಸ್ತೆಯಾಗಿ ಮಡಿಕೇರಿಗೆ ತೆರಳುತ್ತಿದ್ದ ಕಾರು ದೇವರಕೊಲ್ಲಿಯಲ್ಲಿಯ ಹೋನೆಸ್ಟ್ ಸರ್ವಿಸ್ ಸ್ಟೇಷನ್ ಬಳಿ ಬೆಳಿಗ್ಗಿನ ಜಾವ ಮೂರು ಗಂಟೆ ವೇಳೆಗೆ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದಿದ್ದು, ಚಾಲಕ ಸೇರಿದಂತೆ ನಾಲ್ವರು ಗಾಯಗೊಂಡರೆಂದು ತಿಳಿದುಬಂದಿದೆ.
ಶಬ್ದ ಕೇಳಿದ ಸ್ಥಳೀಯರಾದ ರಿಯಾಜ್ ಎಂಬವರು ಬಂದು ಅಕ್ಕಪಕ್ಕದವರನ್ನು ಸೇರಿಸಿ ಗಾಯಾಳುಗಳನ್ನು ಕೊಡಗು ಸಂಪಾಜೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೆಂದು ತಿಳಿದುಬಂದಿದೆ. ಸಂಪಾಜೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಬೆಳಿಗ್ಗೆ ಗಾಯಾಳುಗಳು ತಮ್ಮ ಊರಾದ ಕಾಞಂಗಾಡ್‌ಗೆ ತೆರಳಿದ್ದಾರೆ.‌