ಪಂಜ:ಜೇಸಿ ಸಪ್ತಾಹ

0

ಜೇಸಿಐ ಪಂಜ ಪಂಚಶ್ರೀಯ ಜೇಸಿ ಸಪ್ತಾಹದ ಅಂಗವಾಗಿ ಅ.16. ರಂದು ಸಂಜೆ ಗುತ್ತಿಗಾರು ದೇವಿ ಸಿಟಿ ಕಾಂಪ್ಲೆಕ್ಸ್ ಸಭಾ ಭವನದಲ್ಲಿ ಸಾಧಕರಿಗೆ ಸನ್ಮಾನ ಮತ್ತು ನಗುವಿನ ಹಬ್ಬ ನಡೆಯಿತು. ಜೇಸಿ ವಲಯ ಅಧ್ಯಕ್ಷ JCI SEN Adv.ಗಿರೀಶ್ ಎಸ್ ಪಿ ರವರು ಸಾಧಕರನ್ನು ಸನ್ಮಾನಿಸಿ ಮಾತನಾಡಿದರು. ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಜೀವನ್ ಮಲ್ಕಜೆ ಸಭಾಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಸುಳ್ಯ ಟಿ ಎ ಪಿ ಸಿ ಎಂ ಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಮ್ ದೇರಪ್ಪಜ್ಜನ ಮನೆ, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಮಾತನಾಡಿದರು. ನಾಟಿ ವೈದ್ಯ ಶ್ರೀಮತಿ ಪುಷ್ಪಾ ದೇವಿದಾಸ್ ಬುಡ್ಲೆಗುತ್ತು, ಭಾರತೀಯ ಸೇನೆಯೊಂದಿಗೆ ಬೈಕ್ ರ್‍ಯಾಲಿಯಲ್ಲಿ ಪಾಲ್ಗೊಂಡ 2000 ಕಿ.ಮಿ ಕ್ರಮಿಸಿದ ಸಾಹಸಿ ವೃಷ್ಠಿ ಮಲ್ಕಜೆ, ವಿಶ್ವ ದಾಖಲೆ ನಿರ್ಮಿಸಿದ ಯೋಗ ಪಟು ವಿಹಾನಿ ವಾಲ್ತಾಜೆ, ಮಂಗಳೂರು ವಿಶ್ವವಿದ್ಯಾನಿಲಯದ ರ್‍ಯಾಂಕ್ ವಿಜೇತೆ ಶ್ರಾವ್ಯ ಮುತ್ಲಾಜೆ ರವರನ್ನು ಸನ್ಮಾನಿಸಲಾಯಿತು.

ಜೇಸಿಐ ಪಂಜ ಪಂಚಶ್ರೀ ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ, ‌ನಿಕಟಪೂರ್ವಾದ್ಯಕ್ಷ ಲೋಕೇಶ್ ಆಕ್ರಿಕಟ್ಟೆ, ಸಪ್ತಾಹ ನಿರ್ದೇಶಕ ವಾಚಣ್ಣ ಕೆರೆಮೂಲೆ, ಕಾರ್ಯದರ್ಶಿ ಜೀವನ್ ಶೆಟ್ಟಿಗದ್ದೆ, ಹಾಲೆಮಜಲು ಆದರ್ಶ ಯೂತ್ ಕ್ಲಬ್ ಅಧ್ಯಕ್ಷ ಆಕರ್ಷ್ ಕುಳ್ಳಂಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು . ಇದೇ ವೇಳೆ ವಲಯ ಅಧ್ಯಕ್ಷ JCI SEN Adv.ಗಿರೀಶ್ ಎಸ್ ಪಿ ರವನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ JFM ಜೀವನ್ ಮಲ್ಕಜೆ ಸ್ವಾಗತಿಸಿದರು. ಜೀವನ್ ಶೆಟ್ಟಿಗದ್ದೆ ವಂದಿಸಿದರು. ನಗುವಿನ ಹಬ್ಬ ದಲ್ಲಿ ಕುಡ್ಲ ಕುಸಲ್ ತಂಡದಿಂದ ರವಿ ರಾಮಕುಂಜ ಅಭಿನಯದ ತೆಲಿಕೆದ ಕಮ್ಮೆನ ಪ್ರದರ್ಶನ ಗೊಂಡಿತು.

ಅ.18 ರಂದು ಸಂಜೆ ಗಂಟೆ 6.30 ರಿಂದ ಪಂಜ ಲಯನ್ಸ್ ಭವನದಲ್ಲಿ ಕೌಟುಂಬಿಕ ತರಬೇತಿ ಕಾರ್ಯಗಾರ ನಡೆಯಲಿದೆ.

ಅ.19 ರಂದು ಸಂಜೆ ಗಂಟೆ 7 ರಿಂದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬೆಳ್ಳಾರೆ ಜ್ಞಾನ ಗಂಗಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ ಪಿ ಉಮೇಶ್ ಪಾಲ್ಗೊಳ್ಳಲಿದ್ದಾರೆ. ಜೇಸಿಐ ಪಂಜ ಪಂಚಶ್ರೀ ಪೂರ್ವಾಧ್ಯಕ್ಷ ವಾಸುದೇವ ಮೇಲ್ಪಾಡಿ ರವರಿಗೆ ಕಮಲ ಪತ್ರ ಪುರಸ್ಕಾರ ನಡೆಯಲಿದೆ. ಜೇಸಿಐ ಪೂರ್ವ ವಲಯಾಧ್ಯಕ್ಷ ಪುರಂದರ ರೈ ಪರಸ್ಕರಿಸುವವರು. ಅಂತರಾಷ್ಟ್ರೀಯ ಈಜು ಪಟು ದಿಗಂತ್ ವಿ ಎಸ್, ಮೈಸೂರು ವಿಶ್ವವಿದ್ಯಾನಿಲಯದ ರ್‍ಯಾಂಕ್ ವಿಜೇತೆ ಪ್ರಜ್ಞಾ ಎ ಡಿಸೋಜ, ಉದಯೋನ್ಮುಖ ಯಕ್ಷಗಾನ ಭಾಗವತ ರಚನಾ ಚಿದ್ಗಲ್ ರವರು ಸನ್ಮಾನ ಸ್ವೀಕರಿಸಲಿದ್ದಾರೆ. ಪಂಚಶ್ರೀ ವಿದ್ಯಾನಿಧಿ ಸಮರ್ಪಣೆ ನಡೆಯಲಿದೆ . ಸಾಂಸ್ಕೃತಿಕ ಸಂಭ್ರಮದಲ್ಲಿ ಡ್ಯಾನ್ಸ್ ಮತ್ತು ಬೀಟ್ಸ್ ಮತ್ತು ಸಂಸ್ಥೆ ವಿದ್ಯಾರ್ಥಿಗಳಿಂದ ನೃತ್ಯ ಸಂಭ್ರಮ, ಲಕುಮಿ ತಂಡದ ಕುಸಾಲ್ದ ಕಲಾವಿದರ್ ಅಭಿನಯಿಸುವ ಅರವಿಂದ್ ಬೋಳಾರ್ ವಿಭಿನ್ನ ಪಾತ್ರದ ತುಳು ಹಾಸ್ಯಮಯ ನಾಟಕ ಒರಿಯಾಂಡಲಾ ಸರಿಬೋಡು ಪ್ರದರ್ಶನಗೊಳ್ಳಲಿದೆ.