ಬಂದಡ್ಕದಲ್ಲಿ ಅರೆಭಾಷೆ ಗಡಿನಾಡ ಉತ್ಸವ 2024 – ಆಮಂತ್ರಣ ಬಿಡುಗಡೆ

0

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಗಡಿ ಭಾಗಗಳಲ್ಲಿ ಅರೆಭಾಷೆ ಗಡಿನಾಡ ಉತ್ಸವ – 2024 ನಡೆಯಲಿದ್ದು, ಅ.27ರಂದು ಮೊದಲ ಗಡಿನಾಡ ಉತ್ಸವ ಬಂದಡ್ಕದಲ್ಲಿ ನಡೆಯಲಿದೆ. ಇದರ ಆಮಂತ್ರಣ ಬಿಡುಗಡೆ ಸಮಾರಂಭ ಅ.18ರಂದು ಸುಳ್ಯದ ಕನ್ನಡ ಭವನದಲ್ಲಿ ನಡೆಯಿತು.

ಅರೆಭಾಷೆ ಅಕಾಡೆಮಿ ‌ಅಧ್ಯಕ್ಷರಾದ ಸದಾನಂದ ಮಾವಜಿಯವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಹಿರಿಯ ಸಾಹಿತಿ ಕುತ್ಯಾಳ ನಾಗಪ್ಪ ಗೌಡರು ಆಮಂತ್ರಣ ಬಿಡುಗಡೆಗೊಳಿಸಿದರು. ಬಳಿಕ ನಾಗಪ್ಪ ಗೌಡರನ್ನು ಅಕಾಡೆಮಿಯಿಂದ ಗೌರವಿಸಲಾಯಿತು.

ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ್ ಮುಖ್ಯ ಅತಿಥಿಗಳಾಗಿದ್ದರು.

ಬಂದಡ್ಕ ಗ್ರಾಮ ಗೌಡ ಸಮಿತಿ ಅಧ್ಯಕ್ಷ ವೆಂಕಟ್ರಮಣ ಕೊಯಿಂಗಾಜೆ,
ಅಕಾಡೆಮಿ ನಿರ್ದೇಶಕರುಗಳಾದ ಡಾ.ಎನ್.ಎ.ಜ್ಞಾನೇಶ್, ಚಂದ್ರಾವತಿ ಬಡ್ಡಡ್ಕ ಇದ್ದರು.

ಅರೆಭಾಷೆ ಅಕಾಡೆಮಿ ಸದಸ್ಯ ಚಂದ್ರಶೇಖರ ಪೇರಾಲು ಕಾರ್ಯಕ್ರಮ ನಿರ್ವಹಿಸಿದರು. ಅಕಾಡೆಮಿ ಸದಸ್ಯೆ ಲತಾ ಕುದ್ಪಾಜೆ ವಂದಿಸಿದರು.

ಅ.27ರಂದು ಬಂದಡ್ಕದಲ್ಲಿ ಉತ್ಸವ
ಅಕಾಡೆಮಿ ವತಿಯಿಂದ ಗ್ರಾಮ ಗೌಡ ಸಮಿತಿ ಬಂದಡ್ಕ ಇದರ ಸಹಕಾರದಲ್ಲಿ ಅ.27ರಂದು ಬಂದಡ್ಕದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಯೂರ ಮಂಟಪ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ.

ಬೆಳಗ್ಗೆ ಮೆರವಣಿಗೆ, ಬಳಿಕ ಅರೆಭಾಷೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಉದ್ಘಾಟನೆ ನಡೆಯುವುದು.
ಬೆ.11 ಗಂಟೆಗೆ ಗಡಿಬಾಗಲಿ ಅರೆಭಾಷೆನ ಉಳ್ಸಿ -ಬೆಳ್ಸುವ ಕಾರ್ಯ ಕುರಿತು ಕವಯತ್ರಿ ಸ್ಮಿತಾ ಅಮೃತ ರಾಜ್ ಉಪನ್ಯಾಸ ನೀಡುವರು.

ಬಳಿಕ ಅರೆಭಾಷೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು.

12.30ರಿಂದ ಬಹುಭಾಷಾ ಕವಿ ಗೋಷ್ಠಿ ತೇಜಕುಮಾರ್ ಕುಡೆಕಲ್ಲು ಇವರ ಅಧ್ಯಕ್ಷತೆಯಲ್ಲಿ ‌ನಡೆಯುವುದು.

ಅ.2ರಿಂದ ಮತ್ತೆ ಸಾಂಸ್ಕೃತಿಕ ಮತ್ತೆ ಮನರಂಜನಾ ಕಾರ್ಯಕ್ರಮ.
ಅ.3.30ಕ್ಕೆ ಸಮಾರೋಪ ಸಮಾರಂಭ, ಸಮ್ಮಾನ, ಬಹುಮಾನ ವಿತರಣೆ ನಡೆಯುವುದು.