ಕಡಬದಿಂದ ಮೈಸೂರು ಕಡೆಗೆ ಗೋ ಸಾಗಾಟ

0

ಹಿಂದೂ ಪರ ಸಂಘಟಕರಿಂದ ತಡೆ

ಪೊಲೀಸ್ ವಶ ಪಡೆದು ಪರಿಶೀಲನೆ ಬಳಿಕ ಬಿಡುಗಡೆ

ರಾತ್ರಿ ವೇಳೆ ಕಡಬದಿಂದ ಮೈಸೂರು ಕಡೆಗೆ ಗೋ ಸಾಗಾಟ ನಡೆಸುತ್ತಿದ್ದ ವಾಹನವನ್ನು ಸುಳ್ಯದ ಮೊಗರ್ಪಣೆ ಬಳಿ ಹಿಂದೂ ಪರ ಸಂಘಟಕರು ತಡೆದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಅ ೧೮ ರಂದು ರಾತ್ರಿ ವರದಿಯಾಗಿದೆ.

ಕಡಬದಿಂದ ಟೆಂಪೋ ವಾಹನದಲ್ಲಿ ತರುತ್ತಿದ್ದ ಗೋವುಗಳನ್ನು ಮೊಗರ್ಪಣೆ ಮಸೀದಿ ಬಳಿ ಹಿಂದೂಪರ ಸಂಘಟನೆಯವರು ತಡೆದಿದ್ದಾರೆ. ವಾಹನದಲ್ಲಿ ಎರಡಕ್ಕೂ ಹೆಚ್ಚು ಗೋವುಗಳಿದ್ದು, ಸುಳ್ಯ -ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಬಂದ ಪೊಲೀಸರು ವಾಹನ ಮತ್ತು ಅದರಲ್ಲಿದ್ದ ಗೋವುಗಳನ್ನು ಹಾಗೂ ವ್ಯಕ್ತಿಗಳನ್ನು ಸುಳ್ಯ ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ವಾಹನದಲ್ಲಿ ಮೈಸೂರಿನಿಂದ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ಬಂದಿದ್ದ ಯಾತ್ರಿಕರು ಕಡಬದಿಂದ ಗೋವುಗಳನ್ನು ಖರೀದಿಸಿ ತಮ್ಮೂರಿಗೆ ಕರೆದೊಯ್ಯಲು ಹೊರಟಿದ್ದರೆಂದು ತಿಳಿದು ಬಂದಿದೆ.
ಅದಕ್ಕೆ ಬೇಕಾದ ದಾಖಲೆಗಳೆಲ್ಲವೂ ಅವರ ಬಳಿ ಇದ್ದುದರಿಂದ ವಿಚಾರಣೆ ನಡೆಸಿ ಅವರನ್ನು ಬಿಟ್ಟರೆಂದು ತಿಳಿದು ಬಂದಿದೆ.