ಪಂಜ; ಅಳ್ಪೆ ಚಿಂಗಾಣಿಗುಡ್ಡೆ ದೈವಸ್ಥಾನದ ಉಪಕಟ್ಟಡದ ಪ್ರವೇಶೋತ್ಸವ

0

ಪಂಜ ಅಳ್ಪೆ ಚಿಂಗಾಣಿಗುಡ್ಡೆ ಶ್ರೀ ಉಳ್ಳಾಕುಲು, ಉಳ್ಳಾಲ್ತಿ ಹಾಗೂ ಅರಸುಳ್ಳಾಕಲು ಮತ್ತು ಪರಿವಾರ ದೈವಗಳ ದೈವಸ್ಥಾನದ ಉಪಕಟ್ಟಡ ಪ್ರವೇಶೋತ್ಸವವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅ 21ರಂದು ನಡೆಯಿತು.

ಅರ್ಚಕರಾದ ವಿಷ್ಣು ಪೈಂದೋಡಿ ರವರ ನೇತೃತ್ವದಲ್ಲಿ ಬೆಳಗ್ಗೆ
ವಾಸ್ತು ಪೂಜೆ ,
ಗಣಪತಿ ಹವಣ ದೊಂದಿಗೆ ಮುಕ್ತಾಯಗೊಂಡು ವಿದ್ಯುಕ್ತವಾಗಿ ಶ್ರೀ ದೈವಗಳ ಕಾರ್ಯಕ್ರಮಕ್ಕೆ ಉಪಯೋಗ ಗೊಳ್ಳುವಂತೆ ಸಮರ್ಪಿಸಲಾಯಿತು.

ನಂತರ ಮುಂಬರುವ ದೀಪಾವಳಿ ಪರ್ವಕಾಲದ ತಂಬಿಲ ಸೇವೆಗಾಗಿ ಗ ಗೊನೆ ಮುಹೂರ್ತ ನಡೆಸಿ ಗೊನೆ ಕಟ್ಟಲಾಯಿತು.
ಆಡಳಿತ ಮಂಡಳಿ ಅಧ್ಯಕ್ಷ ಭರತ ರಾಮತೋಟ, ಕಾರ್ಯದರ್ಶಿ ಕುಸುಮಾಧರ ಕರಿಮಜಲು ಆಡಳಿತ ಮಂಡಳಿ ಸದಸ್ಯರು ಹಾಗೂ ಪ್ರಧಾನ ದೈವಪಾರಿಚಾರಕ ಚಂದ್ರಶೇಖರ ಕೋಡಿ, ದೈವ ಪರಿಚಾರಕರು , ಊರಿನ ಸಮಸ್ತ ಭಕ್ತರು ಪಾಲ್ಗೊಂಡಿದ್ದರು.