ಅರಂತೋಡು ಗ್ರಾಮದ ದೇರಾಜೆಯಲ್ಲಿ ಬಿಎಸ್ಎನ್ಎಲ್ ಟವರ್ ಕಾರ್ಯಾರಂಭಗೊಂಡಿದೆ.
ಬಹು ದಿನಗಳಿಂದ ಕೆಲಸ ಪೂರ್ತಿಯಾಗಿ ಕಾರ್ಯ ಆರಂಭ ಮಾಡದೆ ನೆನೆಗುದಿಗೆ ಬಿದ್ದಿದ್ದ ಆರಂತೋಡು ಗ್ರಾಮದ ದೇರಾಜೆ ಬಿಎಸ್ಎನ್ಎಲ್ ಟವರ್ ನ ಸಮಸ್ಯೆಯನ್ನು ಆರಂತೋಡು ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರು ಸಂಸದರ ಗಮನಕ್ಕೆ ತಂದಿದ್ದರು ತಕ್ಷಣ ಸ್ಪಂಧಿಸಿದ ಸಂಸದರು ಒಂದೇ ದಿನದಲ್ಲಿ ಸಂಬಂಧಪಟ್ಟ ಇಲಾಖೆಯ ಮೇಲೆ ಒತ್ತಡ ತಂದು ಕಾರ್ಯಾ ಆರಂಭ ಮಾಡಿಸಿದ್ದಾರೆ.
ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಹೆಮ್ಮೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರಿಗೆ ಮತ್ತು ಸಮಸ್ಯೆಯನ್ನು ಸಂಸದರ ಗಮನಕ್ಕೆ ತಂದ ಅರಂತೋಡು ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ ಕುತ್ತಮೊಟ್ಟೆ ಯವರಿಗೆ ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ಮತ್ತು ನಿಕಟ ಪೂರ್ವ ಅಧ್ಯಕ್ಷರಾದ ಶ್ರೀಮತಿ ಹರಿಣಿ ದಿನೇಶ್ ದೇರಾಜೆರವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.