ಪ್ರಥಮ ಬ್ಯಾಂಕ್ ಆಫ್ ಬರೊಡ, ದ್ವಿತೀಯ ಎಸ್.ಡಿ.ಎಂ.ಕಾಲೇಜು ಉಜಿರೆ
ತೃತೀಯ ಆಳ್ವಾಸ್ ಮೂಡಬಿದ್ರೆ,ಚತುರ್ಥ ಎನ್.ಎಂ.ಸಿ.ಸುಳ್ಯ

ಗೆಳೆಯರ ಬಳಗ ಐವರ್ನಾಡು ಇದರ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಷನ್, ದ.ಕ.ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಮಂಗಳೂರು ಹಾಗೂ ಸುಳ್ಯ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಇವರ ಸಹಭಾಗಿತ್ವದಲ್ಲಿ ಆಹ್ವಾನಿತ 12 ತಂಡಗಳ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟವು ಫೆ.22 ಮತ್ತು ಫೆ.23 ರಂದು ಐವರ್ನಾಡು ಸ.ಪ.ಪೂ.ಕಾಲೇಜು ಮೈದಾನದಲ್ಲಿ ನಡೆಯಿತು.

ರೋಚಕ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಬ್ಯಾಂಕ್ ಆಫ್ ಬರೋಡ ರೂ.70,000 ಹಾಗೂ ಟ್ರೋಫಿ ಯನ್ನು ಪಡೆದುಕೊಂಡಿತು.
ದ್ವಿತೀಯ ಸ್ಥಾನವನ್ನು ಎಸ್.ಡಿ.ಎಂ.ಕಾಲೇಜು ಉಜಿರೆ ರೂ.50,000 ಹಾಗೂ ಟ್ರೋಫಿ ಯನ್ನು ಪಡೆದುಕೊಂಡಿತು.
ತೃತೀಯ ಸ್ಥಾನವನ್ನು ಆಳ್ವಾಸ್ ಕಾಲೇಜು ಮೂಡಬಿದ್ರೆ ರೂ.25,000
ಹಾಗೂ ಟ್ರೋಫಿಯನ್ನು ಪಡೆದುಕೊಂಡಿತು.
ಚತುರ್ಥ ಸ್ಥಾನವನ್ನು ಎನ್.ಎಂ.ಸಿ.ಸುಳ್ಯ ರೂ.,25,000 ಹಾಗೂ ಟ್ರೋಫಿಯನ್ನು ಪಡೆದುಕೊಂಡಿತು.




ಬೆಸ್ಡ್ ರೈಡರ್ ಆಗಿ ಎನ್.ಎಂ.ಸಿ.ತಂಡದ ಮಹೇಶ್, ಬೆಸ್ಡ್ ಕ್ಯಾಚರ್ ಆಗಿ ಎಸ್.ಡಿ.ಎಂ. ನ ಕಾರ್ತಿಕ್,ಬೆಸ್ಡ್ ಆಲ್ ರೌಂಡರ್ ಆಗಿ ಬ್ಯಾಂಕ್ ಆಫ್ ಬರೊಡದ ಸಾಯಿಪ್ರಸಾದ್ ಬಹುಮಾನ ಪಡೆದುಕೊಂಡರು.
ಪಂದ್ಯಾಟ ನಡೆದ ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಯಿತು.
ಐವರ್ನಾಡು ಗೆಳೆಯರ ಬಳಗದ ಗೌರವಾಧ್ಯಕ್ಷ ಎಸ್.ಎನ್.ಮನ್ಮಥ, ಶ್ರೀಮತಿ ಜ್ಯೋತ್ದ್ನಾ ಪಾಲೆಪ್ಪಾಡಿ,ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕುತ್ಯಾಡಿ, ಶ್ರೀಮತಿ ಅಶ್ವಿನಿ ಕೊಪ್ಪತ್ತಡ್ಕ, ಬೆಳ್ಳಾರೆ ಶ್ರೀ ಜಲದುರ್ಗಾದೇವಿ ಅರ್ಥ್ ಮೂವರ್ಸ್ ಮಾಲಕ ಪದ್ಮನಾಭ ಬೀಡು,ಬೆಂಗಳೂರಿನ ಉದ್ಯಮಿ ಲಕ್ಷ್ಮೀನಾರಾಯಣ ಕಣಿಪಿಲ,ಪ್ರೌಢ ಶಾಲಾ ಹಿರಿಯ ಅಧ್ಯಾಪಕ ಸೂಫಿ ಪೆರಾಜೆ,ಪ್ರಗತಿಪರ ಕೃಷಿಕ ದಾಮೋದರ ಜಬಳೆ, ಹಿರಿಯರಾದ ಮಾಧವ ಭಟ್ ಶೃಂಗೇರಿ,ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಗೌರವ ಸಲಹೆಗಾರ ದೊಡ್ಡಣ್ಣ ಬರೆಮೇಲು,ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜೆ.ಟಿ.ವೆಂಕಪ್ಪ ಗೌಡ ಜಬಳೆ,ಗೆಳೆಯರ ಬಳಗದ ಸಂಚಾಲಕ ವಾಸುದೇವ ಬೊಳುಬೈಲು,ಅಧ್ಯಕ್ಷ ಸಾತ್ವಿಕ್ ಕುದುಂಗು,ಪ್ರಧಾನ ಕಾರ್ಯದರ್ಶಿ ಪ್ರಮೋದ್ ಕಣಿಲೆಗುಂಡಿ ಹಾಗೂ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಸಂಚಾಲಕ ದಿನೇಶ್ ಮಡ್ತಿಲ ವಂದಿಸಿದರು.
ತೀರ್ಪುಗಾರರಾದ ಶಿವರಾಮ ಏನೆಕಲ್ ವಿಜೇತರ ಪಟ್ಟಿ ವಾಚಿಸಿದರು.