ಮರ್ಕಂಜ : ತೇರ್ಥಮಜಲಿನಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಬೈಲುಕೋಲ ಹಾಗೂ ಭಗವತಿ ಕ್ಷೇತ್ರಪಾಲ ದೈವಗಳ ತಂಬಿಲ

0

ಮರ್ಕಂಜ ಗ್ರಾಮದ ವಿಷ್ಣುನಗರದ ತೇರ್ಥಮಜಲಿನಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಬೈಲುಕೋಲ ಹಾಗೂ ಭಗವತಿ ಕ್ಷೇತ್ರಪಾಲ ದೈವಗಳ ತಂಬಿಲ ಸೇವೆಯು ಮಾ.೧ ಮತ್ತು ೨ರಂದು ನಡೆಯಿತು.


ಮಾ.೧ರಂದು ಸಂಜೆ ಗಂಟೆ ೬-೦೦ಕ್ಕೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಭಂಡಾರ ಹಿಡಿಯುವುದು, ರಾತ್ರಿ ಗಂಟೆ ೮-೦೦ಕ್ಕೆ ಭಗವತಿ ಕ್ಷೇತ್ರಪಾಲ ದೈವಗಳ ತಂಬಿಲ, ರಾತ್ರಿ ಗಂಟೆ ೯-೦೦ರ ನಂತರ ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ ೧೧-೦೦ಕ್ಕೆ ಕುಳ್ಚಾಟ ಮಾ.೨ರಂದು ದಿವಾ ಗಂಟೆ ೧೦-೦೦ಕ್ಕೆ ಅಗ್ನಿಸೇವೆ, ದಿವಾ ಗಂಟೆ ೧೧-೦೦ಕ್ಕೆ ಶ್ರೀ ದೈವದ ಪ್ರಸಾದ ವಿತರಣೆ ನಡೆಯಿತು. ೧೧-೩೦ಕ್ಕೆ ಗುಳಿಗರಾಜ ದೈವದ ಕೋಲ ನಡೆಯಿತು.

ಈ ಸಂದರ್ಭದಲ್ಲಿ ಗುಡಂಬೆ ಬಾಲಕೃಷ್ಣ ರೈ ಮತ್ತು ಸಹೋದರರು, ಸಹೋದರಿಯರು, ಕುಟುಂಬಸ್ಥರು, ಊರ ಭಕ್ತರು ಉಪಸ್ಥಿತರಿದ್ದರು.