ಭಾರತೀಯ ದಂತ ವೈದ್ಯಕೀಯ ಸಂಘದ ಸುಳ್ಯ ಶಾಖೆಯಲ್ಲಿ ನಿರಂತರ ದಂತ ಶಿಕ್ಷಣದ ಕಾರ್ಯಕ್ರಮ ಮಾ. 15, 2025 ರಂದು ಕೆ ವಿ ಜಿ ದಂತ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ, ‘ದಂತ ಚಿಕಿತ್ಸಾಲಯದಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿಗಳ ನಿರ್ವಹಣೆ’ ಎನ್ನುವ ವಿಚಾರದ ಕುರಿತು ಎ. ಜೆ. ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ತಜ್ಞ ಡಾ. ಕಿಶನ್ ರಾವ್ ಬಾಳಿಲ ಅತಿಥಿ ಉಪನ್ಯಾಸ ನೀಡಿದರು.

ಐಡಿಎ ಸುಳ್ಯ ಶಾಖೆಯ ಅಧ್ಯಕ್ಷ ಡಾ. ಪ್ರಸನ್ನ ಕುಮಾರ್ ಅಧ್ಯಕ್ಷತೆ ವಹಿಸಿ ಸಮಾರಂಭವನ್ನು ಉದ್ಘಾಟಿಸಿದರು. ಸಿಡಿಇ ಸಂಚಾಲಕಿ ಡಾ. ರಮ್ಯಾ ಎಂ. ಕೆ ಅತಿಥಿಯನ್ನು ಪರಿಚಯಿಸಿದರು. ಕಾರ್ಯದರ್ಶಿ ಡಾ. ಜಯಪ್ರಸಾದ ಆನೆಕಾರ ಕಾರ್ಯಕ್ರಮವನ್ನು ನಿರ್ವಹಿಸಿ, ಧನ್ಯವಾದಗಳನ್ನು ಅರ್ಪಿಸಿದರು. 50 ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿ ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದರು.
ಕಾಲ್ಗೇಟ್ ಇಂಡಿಯಾ ಮತ್ತು IPCA ಕಂಪೆನಿಗಳು ಈ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದವು.
