ರಾಜ್ಯದೈವ, ಪುರುಷ ದೈವಗಳ ನೇಮೋತ್ಸವ
ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾ.24 ರಂದಿ ಧಾರ್ಮಿಕ ಕಾರ್ಯಕ್ರಮ ಹಾಗೂ ಮಾ.25 ರಂದು ನೇಮೋತ್ಸವ ನಡೆಯಿತು.

ಮಾ.24 ರಂದು ಗಣಪತಿ ಹೋಮ, ಶತ ರುದ್ರಾಭಿಷೇಕ, ಲಕ್ಷ್ಮಿ ಸಹಿತ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆಯಲಿದೆ. ಸಂಜೆ ಭಜನೆ ರಾತ್ರಿ ಶ್ರೀ ದುರ್ಗಾ ಪೂಜೆ ಮತ್ತು ಕಾರ್ತಿಕ ಪೂಜೆ ನಡೆಯಿತು. ರಾತ್ರಿ ದಿl ಕೀರ್ತಿಶೇಷ ದೇವಕಿ ಸ್ಮರಣಾರ್ಥ
ಶ್ರೀ ಪಂಜುರ್ಲಿ ಪ್ರಸಾದಿತ ಯಕ್ಷಗಾನ ಮಂಡಳಿ ಶಾಸ್ತಾನ ಉಡುಪಿ ಇವರಿಂದ “ಸತ್ಯದ ಸ್ವಾಮಿ ಕೊರಗಜ್ಜ” ಯಕ್ಷಗಾನ ನಡೆಯಿತು.




ಮಾ. 25 ರಂದು ರಾಜ್ಯ ದೈವ ಮತ್ತು ಪುರುಷ ದೈವಗಳ ನೇಮೋತ್ಸವ ನಡೆಯಿತು. ಸಂಪ್ರದಾಯದಂತೆ ಕಂದ್ರಪ್ಪಾಡಿಯಿಂದ ಹಾಗೂ ತಳೂರಿನಿಂದ ಭಂಡಾರ ತಂದು ಇಲ್ಲಿ ನೇಮೋತ್ಸವ ನಡೆಯುವುದು ವಾಡಿಕೆಯಾಗಿದೆ.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ,
ಕೇಶವ ಹೊಸೋಳಿಕೆ, ಸನತ್ ಮುಳುಗಾಡು, ಪುರುಷೋತ್ತಮ ಬದಿಯಡ್ಕ, ಜಯಾನಂದ ಪಟ್ಟೆ, ಶಿವಪ್ರಸಾದ್ ಕಂದ್ರಪ್ಪಾಡಿ , ಶ್ರೀಮತಿ ಉಷಾ ಪುರುಷೋತ್ತಮ ಮಲ್ಕಜೆ, ಪ್ರಧಾನ ಅರ್ಚಕ ಪರಮೇಶ್ವರ ಭಟ್ ಸಮಿತಿ ಆದಿಯಾಗಿ, ವಿವಿಧ ಸಮಿತಿಗಳ ಸದಸ್ಯರು ಕಾರ್ಯಕ್ರಮ ಯಶಸ್ವಿಗೆ ದುಡಿದರು.