ಎ. 7-8: ಬೆಳ್ಳಾರೆಯ ಅಜಪಿಲದಲ್ಲಿ ಒತ್ತೆಕೋಲಕ್ಕೆ, ಗೊನೆ ಮುಹೂರ್ತ

0

ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಏ. 7-8ರಂದು ಬೆಳ್ಳಾರೆಯ ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ನಡೆಯಲಿದ್ದು, ಗೊನೆ ಮುಹೂರ್ತವು ಮುಖ್ಯ ಕರ್ಮಿ ಲೋಕೇಶ್ ಪಾಲ್ತಾಡು ಇವರ ನೇತೃತ್ವದಲ್ಲಿ ಮಾ. 31 ರಂದು ಶ್ರೀ ಕ್ಷೇತ್ರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಚಂದ್ರಹಾಸ ಮಣಿಯಾಣಿ ಪಡ್ಪು, ಗೌರವಾಧ್ಯಕ್ಷರಾದ ಆನಂದ ರೈ ಪುಡ್ಕಜೆ, ಕಾರ್ಯದರ್ಶಿ ವಸಂತಗೌಡ ಪಡ್ಪು, ಕೋಶಾಧಿಕಾರಿ ತೀರ್ಥರಾಮ ಗುಡ್ಡೆಮನೆ, ಸಮಿತಿಯ ಪೂರ್ವಾಧ್ಯಕ್ಷರುಗಳಾದ ಸಂಜೀವ ಮಣಿಯಾಣಿ ಬೀಡು, ಕೊರಗಪ್ಪ ಕುರುಂಬುಡೇಲು, ಆನಂದ ಗೌಡ ಪಡ್ಪು, ಉಪಾಧ್ಯಕ್ಷರಾದ ನಾರಾಯಣ ಪಾಟಾಳಿ ಬಸ್ತಿಗುಡ್ಡೆ, ಹಾಗೂ ಸದಸ್ಯರುಗಳಾದ ಪದ್ಮನಾಭ ಚೂಂತಾರು, ಹಾಗೂ ನರೇಶ್ ರೈ ಅಜಪಿಲ, ಹರ್ಷಿತ್ ಮಣಿಮಜಲು, ಊರ ಹಾಗೂ ಪರ ಊರಿನ ಭಕ್ತಾದಿ ಬಂಧುಗಳು ಉಪಸ್ಥಿತರಿದ್ದರು.