ಹರಿಹರ ಪಲ್ಲತಡ್ಕ: ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ ಬಟ್ಟೋಡಿಯವರಿಗೆ ಬೀಳ್ಕೊಡುಗೆ

0

ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಬಟ್ಟೋಡಿ ಸೇವಾ ನಿವೃತ್ತಿಗೊಂಡ ಹಿನ್ನೆಲೆಯಲ್ಲಿ ಮಾ.31 ರಂದು ಸಂಸ್ಥೆಯ ವತಿಯಿಂದ ಬೀಳ್ಕೊಡಲಾಯಿತು.

ಈ ಸಂದರ್ಭ ಚಂದ್ರಶೇಖರ ಬಟ್ಟೋಡಿ ಅವರನ್ನು ಶಾಲು, ಹೂ, ಹಾರ,ಸ್ಮರಣಿಕೆ, ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಪತ್ನಿ ಕಿರಣ ಗೃಹಿಣಿ. .ಮಕ್ಕಳಾದ ಶಶಾಂಕ ಬಿ.ಸಿ ಮತ್ತು ಶ್ರಾವ್ಯ ಬಿ.ಸಿ ಜತೆ‌ಗಿದ್ದರು.

ಈ ಸಂದರ್ಭ ಸೊಸೈಟಿಯ ಆಡಳಿತಾಧಿಕಾರಿ ಮನೋಜ್ ಕುಮಾರ್ ಮಾಣಿಬೈಲು, ನಿಕಟ ಪೂರ್ವ ಅಧ್ಯಕ್ಷ ಹರ್ಷಕುಮಾರ್ ದೇವಜನ, ಕಾರ್ಯನಿರ್ವಾಹಣಾಧಿಕಾರಿ ಅನಂತರಾಮ ಮಣಿಯಾನ, ನಿವೃತ್ತ ‌ಮುಖ್ಯ . ಅಧಿಕಾರಿ ಶೇಷಪ್ಪ ಗೌಡ ಕಿರಿಭಾಗ ವೇದಿಕೆಯಲ್ಲಿದ್ದರು. ಮಾಜಿ ಅಧ್ಯಕ್ಷ ವಿನೂಪ್ ಮಲ್ಲಾರ ಮತ್ತಿತರರು ಅಭಿಪ್ರಾಯ ವ್ಯಕ್ತಪಡಿಸಿದರು. ಸಿಬ್ಬಂದಿಗಳು, ಹಿತೈಷಿಗಳು, ಸಂಘ ಸದಸ್ಯರು ಉಪಸ್ಥಿತರಿದ್ದರು.