ವಿಜಯ ಪಡ್ಡಂಬೈಲು ರವರಿಗೆ ದುಬೈನಲ್ಲಿ ಗೌರವ

0

 

ಇಂಟರ್ ನ್ಯಾಶನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಕನ್ನಡ ಮಿತ್ರರು ಯುಎಇ ಇವರ ಜಂಟಿ ಆಯೋಜನೆಯಲ್ಲಿ ದುಬೈ ನ ಫಾರ್ಚೂನ್ ಸಭಾಂಗಣದಲ್ಲಿ
ಆ. 27ರಂದು ನಡೆದ 34ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿವೃತ್ತಿಗೊಂಡ ಪಶು ಸಂಗೋಪನೆ ಇಲಾಖೆಯ ನಿವೃತ್ತ ನೌಕರ ವಿಜಯ ಪಡ್ಡಂಬೈಲು ಅವರನ್ನು ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಅಬುಧಾಬಿ ಕನ್ನಡ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ದುಬೈ ಕನ್ನಡ ಮಿತ್ರರು ಸಂಘದ ಅಧ್ಯಕ್ಷ ಶಶಿಧರ್ ನಾಗರಾಜಪ್ಪ, ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶ್ ಕುಮಾರ್ ಹೊಸಮನಿ, ಉದ್ಯಮಿ ಹಿದಾಯತ್ ಅಡ್ಡೂರ್, ಐ.ಸಿ.ಎಫ್ ಸಿ.ಐ ಅಧ್ಯಕ್ಷ ಮಂಜುನಾಥ್ ಸಾಗರ್ ಕೆ.ಪಿ, ವಿಜಯಕುಮಾರ್ ಪಡ್ಡಂಬೈಲ್ ರವರ ಸಹೋದರ, ತಾರಸಿ ಕೃಷಿಕ ಕೃಷ್ಣಪ್ಪ ಗೌಡ ಪಡ್ಡಂಬೈಲು ಮೊದಲಾದವರು ಉಪಸ್ಥಿತರಿದ್ದರು