ಅಜ್ಜಾವರದಲ್ಲಿ ಜೀಪು – ಬೈಕ್ ಅಪಘಾತ : ಗಂಭೀರ ಗಾಯಗೊಂಡಿದ್ದ ಸವಾರ ಮೃತ್ಯು

0

ಅಜ್ಜಾವರ ಗ್ರಾಮದ ಮಾರ್ಗ ಎಂಬಲ್ಲಿ ಜೀಪು ಮತ್ತು ಬೈಕ್ ಮಧ್ಯೆ ಅಪಘಾತ ನಡೆದ ಪರಿಣಾಮ ಬೈಕ್ ನಲ್ಲಿದ್ದ ದಂಪತಿಗಳಿಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ತರುತ್ತಿದ್ದ ವೇಳೆ ಬೈಕ್ ಸವಾರ ದಾರಿ ಮಧ್ಯೆ ಮೃತರಾಗಿರುವುದಾಗಿ ತಿಳಿದುಬಂದಿದೆ.

ಅಜ್ಜಾವರ ಪಡ್ಡಂಬೈಲು ಕೆಎಫ್ ಡಿಸಿ ಉದ್ಯೋಗಿಯಾಗಿರುವ ವಿನಾಯಕ ಮೂರ್ತಿ‌ ಹಾಗೂ ಮಂಜುಳಾ ದಂಪತಿ ಬೆಳಗ್ಗೆ ಕೆಲಸ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿರುವಾಗ ಅಜ್ಜಾವರ ದಲ್ಲಿ ಈ ಘಟನೆ ನಡೆದಿದೆ.


ಗಾಯಾಳುಗಳನ್ನು ಸ್ಥಳದಿಂದ ಪ್ರಗತಿ ಆ್ಯಂಬುಲೆನ್ಸ್ ಮೂಲಕ ಕೆವಿಜಿ ಆಸ್ಪತ್ರೆಗೆ ತರಲಾಗಿತ್ತು. ಮೃತರ
ಪತ್ನಿ ಚಿಕಿತ್ಸೆ ಪಡೆಯುತ್ತಿದ್ದಾರೆ.