ಕ್ಯಾಂಪ್ಕೋ ವತಿಯಿಂದ ಸಹಾಯಧನ ವಿತರಣೆ

0


ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ ಕ್ಯಾಂಪ್ಕೊ ಕಡಬ ಶಾಖೆಯ ಸಕ್ರಿಯ ಸದಸ್ಯರಾದ ನೊಣಪ್ಪ ಗೌಡ ಹಾಗೂ ಗೋಪಾಲಕೃಷ್ಣ ಡಿ.ರವರ ತೆರೆದ ಹೃದಯ ಅಂಜಿಯೋಪ್ಲಾಸ್ಟಿ ಚಿಕಿತ್ಸೆಯ ಸಹಾಯಧನದ ಮೊತ್ತ ತಲಾ ರೂ.೫೦೦೦೦/- (ರೂಪಾಯಿ ಐವತ್ತು ಸಾವಿರ) ದ ಚೆಕ್ಕನ್ನು ಕ್ಯಾಂಪ್ಕೊ ಸಂಸ್ಥೆಯ ನಿರ್ದೇಶಕರಾದ ಕೃಷ್ಣಪ್ರಸಾದ ಮಡ್ತಿಲರವರು ಎ. ೨೫ರಂದುರಂದು ಸದಸ್ಯರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಸದಸ್ಯರಾದ ಇಮ್ಮಾನ್ಯುವೆಲ್ ಪಿ. ಜೆ., ಎಂ.ಕೃಷ್ಣ ಭಟ್ ಕನಕವನ, ರಘುಚಂದ್ರ ರೈ, ಶಿವಪ್ಪ ಗೌಡ, ಶ್ರೀಮತಿ ವಸಂತಿ ಹಾಗೂ ಕಡಬ ಶಾಖೆಯ ಪ್ರಬಂಧಕರಾದ ಮಹೇಶ ಕೆ.ಎನ್. ಉಪಸ್ಥಿತರಿದ್ದರು.