ಮೊಗರ್ಪಣೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಿಕಪ್   ಚರಂಡಿಗೆ

0

 

ಮೊಗರ್ಪಣೆ ವೆಂಕಟರಮಣ ಸೊಸೈಟಿ ಮುಂಭಾಗ ತಿರುವಿನಲ್ಲಿ ಸುಳ್ಯದಿಂದ ಹಳಿಗೇಟಿನ ಕಡೆ ಬರುತ್ತಿದ್ದ ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಫುಟ್ಬಾತ್ ಪಕ್ಕದ ಚರಂಡಿಗೆ ಬಿದ್ದ ಘಟನೆ ಇಂದು ವರದಿಯಾಗಿದೆ.
ಹಾಸನದಿಂದ ತರಕಾರಿಗಳನ್ನು ತಂದು ಸುಳ್ಯ ಪರಿಸರದ ಅಂಗಡಿಗಳಿಗೆ ಲೈನ್ ಸೇಲ್ ಮುಗಿಸಿ ಮರಳಿ ಹೋಗುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ.


ಅಪಘಾತದಿಂದ ಚಾಲಕ ಮತ್ತು ಸಹ ಸವಾರರಿಗೆ ಯಾವುದೇ ಹಾನಿ ಉಂಟಾಗಿಲ್ಲ. ಪಿಕ್ ಅಪ್ ವಾಹನದ ಒಂದು ಬದಿಯ ಚಕ್ರಗಳು ಚರಂಡಿಗೆ ಸಿಲುಕಿ ವಾಹನಕ್ಕೆ ಅಲ್ಪ ಸ್ವಲ್ಪ ಜಕಮ್ ಉಂಟಾಗಿದೆ.