ಸುಳ್ಯ ತಾಲೂಕು ಪಿಂಚಣಿದಾರರ ಮತ್ತು ನಿವೃತ್ತ ನೌಕರರ ಸಂಘ ವಾರ್ಷಿಕ ಮಹಾಸಭೆ

0

ಸುಳ್ಯ ತಾಲೂಕು ಪಿಂಚಣಿ ದಾರರ ಮತ್ತು ನಿವೃತ್ತ ನೌಕರರ ಸಂಘ (ರಿ) ಇದರ 2022 – 23ನೇ ಸಾಲಿನ ವಾರ್ಷಿಕ ಮಹಾಸಭೆ ಜೂನ್ 13ರಂದು ಸುಳ್ಯ ಸಂಧ್ಯಾ ರಶ್ಮಿ ಸಭಾಭವನದಲ್ಲಿ ನಡೆಯಿತು.

ಸಭೆ ಆರಂಭದಲ್ಲಿ ಸಂಘದ ಸದಸ್ಯೆ ಎಂ ವಿ ಗಿರಿಜಾ ಪ್ರಾರ್ಥನಾ ಗೀತೆಯನ್ನು ಹಾಡಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಡಾ. ಎಸ್ ರಂಗಯ್ಯ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಸೇನಾನಿ ಅಡ್ಡಂತಡ್ಕ ದೇರಣ್ಣಗೌಡ, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.


ಅಗಲಿದ ಸಂಘದ ಸದಸ್ಯರುಗಳಿಗೆ ಒಂದು ನಿಮಿಷದ ಮೌನಚರಣೆಯನ್ನು ನಡೆಸಿದ ಬಳಿಕ ಸಭೆ ಆರಂಭವಾಯಿತು. ಕಳೆದ ಸಾಲಿನ ವರದಿವಾಚನವನ್ನು ಕಾರ್ಯದರ್ಶಿ ಪ್ರೊಫೆಸರ್ ಕೆ ವಿ ದಾಮೋದರ ಗೌಡ ವಾಚಿಸಿದರು. ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧಕರ ವರದಿಯನ್ನು ಸಂಘದ ಕೋಶಾಧಿಕಾರಿ ಎಂ ಸುಬ್ರಹ್ಮಣ್ಯ ಹೊಳ್ಳ ಮಂಡಿಸಿದರು.
ಸಂಘದ ಜೊತೆ ಕಾರ್ಯದರ್ಶಿ ನೀರಬಿದ್ರೆ ನಾರಾಯಣ ಸುಳ್ಯ ರವರ ನಿರ್ವಹಣೆಯಲ್ಲಿ ರಚಿಸಲಾದ ಸಂಧ್ಯಾ ರಶ್ಮಿ 2022- 23 ವಿಶೇಷ ಸಂಚಿಕೆಯನ್ನು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಬಿಡುಗಡೆಗೊಳಿಸಿದರು.


ವೇದಿಕೆಯಲ್ಲಿ ಉಪಸ್ಥಿತರಿದ್ದ ಅಡ್ಡಂತಡ್ಕ ದೇರಣ್ಣ ಗೌಡ ಸಂಘದ ಕಾರ್ಯಚಟುವಟಿಕೆಗಳು ಮತ್ತು ಮುಂದಿನ ದಿನಗಳಲ್ಲಿ ಸಂಘದ ಬೆಳವಣಿಗೆಗಳಿಗೆ ಬೇಕಾದ ಪೂರಕ ವಿಷಯಗಳ ಕುರಿತು ಮಾತನಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮುಖ್ಯಸ್ಥರಾದ ಎಂ ವಿಶ್ವನಾಥ ನಾಯರ್ ಸಂಧ್ಯಾ ರಶ್ಮಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಬಗ್ಗೆ ಮಾಹಿತಿ ನೀಡಿದರು. ಸಂಧ್ಯಾಚೇತನ ಹಿರಿಯ ನಾಗರಿಕ ಸಂಘದ ಬಗ್ಗೆ ಹಿರಿಯರಾದ ಸಂಘದ ಗೌರವ ಅಧ್ಯಕ್ಷ ಎ ಬಾಬು ಗೌಡ ಗೌಡ ಮಾಹಿತಿ ನೀಡಿದರು.


ಬಳಿಕ ಸಭೆಯಲ್ಲಿ ಅಧ್ಯಕ್ಷರ ಅನುಮತಿ ಮೇರೆಗೆ ಇತರ ವಿಷಯಗಳ ಚರ್ಚೆಗಳು ನಡೆದು ಮುಂದಿನ ಸಾಲಿನಲ್ಲಿ ನಡೆಸಬೇಕಾದ ಕ್ರಿಯಾ ಯೋಜನೆಗಳ ಕುರಿತು ಚರ್ಚೆಗಳು ನಡೆದವು. ಕೊನೆಗೆ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಕಾರ್ಯದರ್ಶಿ ಕೇ ವಿ ದಾಮೋದರ ಗೌಡ ಸಾಗತಿಸಿ ಉಪಾಧ್ಯಕ್ಷೆ ವೈ ಕೆ ರಮಾ ವಂದಿಸಿದರು.