ಶೇಣಿಯಲ್ಲಿ ಇಂದಿ‌ರಾ ಸೇವಾ ಕೇಂದ್ರ ಉದ್ಘಾಟನೆ

0


ಉಚಿತ ಆನ್ ಲೈನ್ ರಿಜಿಸ್ಟ್ರೇಷನ್ ಸೇವೆ ಆರಂಭ


ಕರ್ನಾಟಕ ರಾಜ್ಯ ಸರ್ಕಾರ ಘೋಷಿಸಿದ ಗೃಹಲಕ್ಷ್ಮಿ, ಶಕ್ತಿ, ಗ್ರಹ ಜ್ಯೋತಿ, ಯುವ ನಿಧಿ ಯೋಜನೆಯ ಉಚಿತ ಮಾಹಿತಿ ಮತ್ತು ನೊಂದಾವಣೆ ಕೇಂದ್ರದ ಉದ್ಘಾಟನೆಯನ್ನು ಜೂ. 15ರಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್ ನೆರವೇರಿಸಿ ಶುಭಹಾರೈಸಿದರು.


ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಜಯಪ್ರಕಾಶ್ ರೈ, ಕೆಪಿಸಿಸಿ ಮಾಜಿ ಕಾರ್ಯದರ್ಶಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ರಾಜೀವಿ ಆರ್. ರೈ, ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಸದಾನಂದ ಮಾವಜಿ. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಪಿ.ಎಸ್. ಗಂಗಾಧರ, ನಂದರಾಜ್ ಸಂಕೇಶ, ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ರಾಮಯ್ಯ ರೈ, ಗ್ರಾಮ ಪಂಚಾಯಿತಿ ಸದಸ್ಯರಾದ ವೆಂಕಟ್ರಮಣ ಗೌಡ ಇಟ್ಟಿಗುಂಡಿ ಮತ್ತು ಶ್ರೀಮತಿ ಮೀನಾಕ್ಷಿ ಚೂಂತಾರು ಉಪಸ್ಥಿತರಿದ್ದರು.


ಅಮರಪಡ್ನೂರು ಗ್ರಾಮದ ಫಲಾನುಭವಿಗಳಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಸದಸ್ಯ ಅಶೋಕ ಚೂಂತಾರುರವರರ ಮನೆಯಲ್ಲಿ ಕಾರ್ಯಕ್ರಮ ನಡೆಯಿತು. ಇವರೊಂದಿಗೆ ಇವರ ಪತ್ನಿ ಶ್ರೀಮತಿ ಶೋಭಾ ಅಶೋಕ್ ಸಹಕರಿಸಿದ್ದರು.


ಉದ್ಘಾಟನಾ ಕಾರ್ಯಕ್ರಮದಲ್ಲಿ ಬೆಳ್ಳಾರೆ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಅನೀಲ್ ರೈ ಪುಡ್ಕಜೆ, ರವಿ ಕುಮಾರ್ ಅಕ್ಕೊಜಿಪಾಲ್, ಕುಮಾರ್ ಕೂಟೇಲು ಗೋಪಾಲಕೃಷ್ಣ ಪಾಡಾಜೆ, ಹರಿಯಪ್ಪ ಪೂಜಾರಿ, ಕೆ.ಬಿ ನಾಯ್ಕ ಪೊನಡ್ಕ, ಕಮಲ ನೇಣಾರು, ಬಾಲಕಿ ಕಜೆಮೂಲೆ ಶಿವರಾಮ ಚೂಂತಾರು ಹಾಗೂ ಇತರ ಕಾರ್ಯಕರ್ತರು, ಫಲಾನುಭವಿಗಳು ಉಪಸ್ಥಿತರಿದ್ದರು.