ಕಲ್ಲುಗುಂಡಿ: ಮಾಡ್ತಮೂಲೆ ಕಾಡಿನಲ್ಲಿ ವನಮಹೋತ್ಸವ ಹಾಗೂ ಬೀಜ ಬಿತ್ತನೆ ಕಾರ್ಯಕ್ರಮ

0


ಸಂಪಾಜೆ ಗ್ರಾಮದ ಕಲ್ಲುಗುಂಡಿ ಮಾಡ್ತಮೂಲೆ ಬಳಿ ಕಾಡಿನಲ್ಲಿ ವನಮಹೋತ್ಸವ ಹಾಗೂ ಬೀಜ ಬಿತ್ತನೆ ಕಾರ್ಯಕ್ರಮ ಅರಣ್ಯ ಇಲಾಖೆ ಹಾಗೂ ಆರ್. ಎಂ. ಎಸ್. ಎ ಪ್ರೌಢಶಾಲೆ ಕಲ್ಲುಗುಂಡಿ ಜಂಟಿ ಅಶ್ರಯದಲ್ಲಿ ನಡೆಯಿತು.


ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮ ಪಂಚಾಯತ್ ಸದಸ್ಯರುಗಳಾದ ಅಬೂಸಾಲಿ ಗೂನಡ್ಕ, ಸವಾದ್ ಗೂನಡ್ಕ, ಎಸ್. ಕೆ. ಹನೀಫ್. ಫಾರೆಸ್ಟ್ ಚಂದ್ರು, ಹಾಗೂ ಸಿಬ್ಬಂದಿಗಳು, ಶಾಲಾ ಶಿಕ್ಷಕಿಯರು, ವಿದ್ಯರ್ಥಿಗಳು ಉಪಸ್ಥಿತರಿದ್ದರು. ಬೀಜ ಬಿತ್ತನೆ ಕಾರ್ಯಕ್ರಮದಲ್ಲಿ ಎಲ್ಲರೂ ಸಹಕರಿಸಿದರು.