ಎಡಮಂಗಲ ಹಾಲು ಸೊಸೈಟಿ ಸಿಬ್ಬಂದಿ ಹರಿಯಪ್ಪರಿಗೆ ತಾಲೂಕಿನ ಅತ್ಯುತ್ತಮ ಕೃತಕ ಗರ್ಭಧಾರಣಾ ಕಾರ್ಯಕರ್ತ ಪ್ರಶಸ್ತಿ

0


ಎಡಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ಸಿಬ್ಬಂದಿ ಕೃತಕ ಗರ್ಭಧಾರಣ ಕಾರ್ಯಕರ್ತರಾದ ಹರಿಯಪ್ಪರಿಗೆ ಸುಳ್ಯ ತಾಲೂಕಿನ ಅತ್ಯುತ್ತಮ ಕೃತಕ ಗರ್ಭಧಾರಣ ಕಾರ್ಯಕರ್ತ ಎಂಬ ಪ್ರಶಸ್ತಿಗೆ ಭಾಜನರಾಗಿರುತ್ತಾರೆ.


ಇವರಿಗೆ ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಇಂದು ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಎಡಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ಕಟ್ಟಬೀಡು ಮತ್ತು ಕಾರ್ಯದರ್ಶಿಗಳಾದ ಮಾಧವ ವೈ, ಸಂಘದ ಸದಸ್ಯರಾದ ಪ್ರಕಾಶ್ ಭಟ್ ಎನ್.ಎಸ್. ಉಪಸ್ಥಿತರಿದ್ದರು.