ಪೂರ್ಣಿಮಾ ತೋಟಪ್ಪಾಡಿಯವರಿಗೆ ಕಾವ್ಯಸಿರಿ ಪ್ರಶಸ್ತಿ

0

ಕರ್ನಾಟಕ ರಾಜ್ಯ ಭಾವೈಕ್ಯ ಪರಿಷತ್, ದ.ಕ. ಜಿಲ್ಲೆ ಇದರ ಆಶ್ರಯದಲ್ಲಿ ಜು. 30ರಂದು ನಡೆದ ಭಾವೈಕ್ಯ ಸಮ್ಮಿಲನದ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಪೆರ್ಲಂಪಾಡಿ 2ನೇ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶ್ರೀಮತಿ ಪೂರ್ಣಿಮಾ ತೋಟಪ್ಪಾಡಿಯವರು ಕವನ ವಾಚಿಸಿ ಕಾವ್ಯ ಸಿರಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇವರು ಪೆರ್ಲಂಪಾಡಿಯಲ್ಲಿ ಮಿಥಿಲೇಶ್ ಆರ್ಟ್ಸ್ ಮತ್ತು ಗ್ರೀಷ್ಮಾ ಗ್ರೀನ್ ನರ್ಸರಿಯ ಮಾಲಕರಾಗಿರುವ ಆರ್ಟಿಸ್ಟ್ ಪರಮೇಶ್ವರ ಗೌಡರ ಪತ್ನಿಯಾಗಿರುವ ಇವರು
ಮಂಡೆಕೋಲು ಗ್ರಾಮದ ಕುಕ್ಕೋಟಿ ಲಿಂಗಪ್ಪ ಗೌಡ ತೋಟಪ್ಪಾಡಿ ಮತ್ತು ಶ್ರೀಮತಿ ಗಿರಿಜಾ ದಂಪತಿಯ ಪುತ್ರಿ.
ಸುಳ್ಯದಲ್ಲಿ ಮಹಿಳಾ ಕಂಡಕ್ಟರ್ ಆಗಿ, ಕುಕ್ಕೇಟಿ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ
ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿರುವ ಇವರು ಸುಳ್ಯ ಚಂದನ ಸಾಹಿತ್ಯ ವೇದಿಕೆ, ಚಿಗುರೆಲೆ ಸಾಹಿತ್ಯ ಬಳಗ
ಪುತ್ತೂರು, ಬೆಳ್ಳಾರೆ ಜೇಸೀಸ್ ಇದರ ಸಕ್ರೀಯ ಸದಸ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಕ್ತಿಗೀತೆ, ಹಾಡು, ಕವನವಾಚನ, ಕಥೆ ರಚನೆ, ಭಜನೆ, ಕುಣಿತ ಭಜನೆಗಳಲ್ಲಿ ಭಾಗವಹಿಸುತ್ತಿದ್ದಾರೆ.