ನೀಲಾವತಿ ಹರಿಹರಪಲ್ಲತಡ್ಕ ನಿಧನ

0

ಹರಿಹರ ಪಲ್ಲತಡ್ಕ ಗ್ರಾಮದ ಪಲ್ಲತಡ್ಕ ನಿವಾಸಿ ದಿ.ಪದ್ಮನಾಭ ಕ್ಷೌರಿಕರವರ ಧರ್ಮಪತ್ನಿ ಶ್ರೀಮತಿ ನೀಲಾವತಿಯವರು ಇಂದು ರಾತ್ರಿ 8 ಗಂಟೆ ಸುಮಾರಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಸುಮಾರು 77 ವರ್ಷ ವಯಸ್ಸಾಗಿತ್ತು.
ಕಾಲಿನ ನರದ ಸಮಸ್ಯೆಯ ಚಿಕಿತ್ಸೆಗಾಗಿ ಮಂಗಳೂರಿನ ಶ್ರೀನಿವಾಸ ಆಸ್ಪತ್ರೆಗೆ ಅವರನ್ನು ಕೆಲದಿನಗಳ ಹಿಂದೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗುವ ಲಕ್ಷಣ ಕೂಡ ಕಂಡುಬಂದಿತ್ತೆನ್ನಲಾಗಿದೆ. ಆದರೆ ಇಂದು ಸಂಜೆ ಆರೋಗ್ಯದಲ್ಲಿ ಏರುಪೇರಾಗಿ ಅವರು ಕೊನೆಯುಸಿರೆಳೆದರು.
ಮೃತರು ಪುತ್ರರಾದ ದೇವದಾಸ ಎಸ್.ಪಿ., ಶ್ರೀಧರ ಎಸ್.ಪಿ., ರೋಹಿತಾಕ್ಷ ಎಸ್.ಪಿ., ಪುತ್ರಿಯರಾದ ರೇವತಿ ಉಪ್ಪಿನಂಗಡಿ, ಕೇಶವೇಣಿ ಬಳ್ಳಮಂಜ, ಗುಲಾಬಿ ಹರಿಹರಪಲ್ಲತಡ್ಕ, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಮರಿಮಕ್ಕಳನ್ನು ಅಗಲಿದ್ದಾರೆ.