ಪಲ್ಲತ್ತಡ್ಕ : ಕ್ಷೀರ ಎಂಟರ್ ಪ್ರೈಸಸ್, ಕ್ಷೀರ ಇಂಜಿನಿಯರಿಂಗ್ ಸಮೂಹ ಸಂಸ್ಥೆಯಲ್ಲಿ ಆಯುಧ ಪೂಜೆ

0

ಮುರುಳ್ಯ ಪಲ್ಲತ್ತಡ್ಕ ಮಿಲ್ಕ್ ಮಾಸ್ಟರ್ ಖ್ಯಾತಿಯ ದಿವಂಗತ ರಾಘವ ಗೌಡರು ಹುಟ್ಟು ಹಾಕಿದ ಸಮೂಹ ಸಂಸ್ಥೆಗಳಾದ ಕ್ಷೀರ ಎಂಟರ್ ಪ್ರೈಸಸ್ ಮತ್ತು ಕ್ಷೀರ ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ ವೇದಮೂರ್ತಿ ಪ್ರಶಾಂತ್ ಪರ್ಲತ್ತಾಯರ ನೇತೃತ್ವದಲ್ಲಿ ಆಯುಧ ಪೂಜೆ, ವಾಹನ ಪೂಜೆ ಅ. 21 ರಂದು ನಡೆಯಿತು.

ಕುಟುಂಬ ವರ್ಗದವರಾದ ಲೀಲಾವತಿ ಮಿಲ್ಕ್ ಮಾಸ್ಟರ್, ಕುಸುಮಾಧರ ಕೇಪಳಕಜೆ, ಮೈನಾ ಕುಸುಮಾಧರ, ಯತೀಶ್ ಪಾಲೋಳಿ, ಮಧು ಯತೀಶ್, ಸಾಂತಪ್ಪ ಗೌಡ ಪಾಳೋಲಿ, ಉಮೇಶ್ ಮಾಸ್ಟರ್ ಪಲ್ಲತ್ತಡ್ಕ, ದಾಸಪ್ಪ ಗೌಡ ಪಾಲೋಳಿ, ಬಾಲಕೃಷ್ಣ ಪಾಲೋಳಿ, ಮತ್ತು ವೆಂಕಪ್ಪ ಗೌಡ ಆಲಾಜೆ, ಲೋಕನಾಥ ಹುದೇರಿ , ರೋಹಿತಾಶ್ವ ಹುದೇರಿ , ಸಿಬ್ಬಂದಿ ವರ್ಗ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.