ಅಯ್ಯನಕಟ್ಟೆ ಜಾತ್ರೋತ್ಸವ ಆಮಂತ್ರಣ ಬಿಡುಗಡೆ

0

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಮತ್ತು ಪರಿವಾರ ದೈವಗಳ ಜಾತ್ರೋತ್ಸವ ಜ. 26ರಿಂದ ಜ. 29ರ ತನಕ ಜರಗಲಿದ್ದು, ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಜ. 14ರಂದು ಮೂರು ಕಲ್ಲಡ್ಕ ಶ್ರೀ ಇಷ್ಟದೇವತಾ ಉಳ್ಳಾಕುಲು ಸನ್ನಿಧಿಯಲ್ಲಿ ನಡೆಯಿತು. ದೈವಸ್ಥಾನದ ವಿಶ್ವಸ್ಥರಾದ ಬಾಳಿಲ ಸುಬ್ರಾಯ ಅಡಿಕೆಹಿತ್ಲು ಆಮಂತ್ರಣವನ್ನು ಬಿಡುಗಡೆ ಮಾಡಿದರು.

ವಿಶ್ವಸ್ಥರುಗಳಾದ ವೆಂಕಟ್ರಮಣ ಗೌಡ ತಂಟೆಪ್ಪಾಡಿ, ಶೀನಪ್ಪ ಗೌಡ ತೋಟದಮೂಲೆ ಉಪಸ್ಥಿತರಿದ್ದರು. ಶ್ರೀ ಇಷ್ಟದೇವತಾ ಉಳ್ಳಾಕುಲು ಸೇವಾ ಸಮಿತಿ ಅಧ್ಯಕ್ಷ ಚೆನ್ನಪ್ಪ ಗೌಡ ಕಜೆಮೂಲೆ, ಉಪಾಧ್ಯಕ್ಷ ಅನಂತಕೃಷ್ಣ ತಂಟೆಪ್ಪಾಡಿ, ಕಾರ್ಯದರ್ಶಿ ಪ್ರಶಾಂತ್ ಕಿಲಂಗೋಡಿ, ಸದಸ್ಯರಾದ ರಾಮ್ ಪ್ರಸಾದ್ ಕಾಂಚೋಡು, ಕೂಸಪ್ಪ ಗೌಡ ಮುಗುಪ್ಪು, ಜಗನ್ನಾಥ ರೈ ಉರುಂಬಿ, ಕೃಷ್ಣಪ್ಪ ಪೂಜಾರಿ ಮೂಲೆಮಜಲು, ಗಂಗಾಧರ ತೋಟದಮೂಲೆ, ಮಾರ್ಗದರ್ಶಕ ಮಂಡಳಿ ಸದಸ್ಯರಾದ ಗಣೇಶ ಮುದ್ದಾಜೆ, ಮುಂಡುಗಾರು ಸುಬ್ರಹ್ಮಣ್ಯ, ಸುಧಾಕರ ರೈ ಎ.ಎಂ, ರುಕ್ಮಯ್ಯ ಗೌಡ ಬಾಳಿಲ, ಜಾತ್ರೋತ್ಸವ ಸಮಿತಿ ಗೌರವಾಧ್ಯಕ್ಷ ಸಪ್ತಗಿರಿ ಪುರಂದರ ಗೌಡ, ಅಧ್ಯಕ್ಷ ಶ್ರೀನಾಥ್ ರೈ ಬಾಳಿಲ, ಕಾರ್ಯದರ್ಶಿ ಕುಶಾಲಪ್ಪ ಗೌಡ ಬಿ. ಮಣಿಮಜಲು, ಉಪಾಧ್ಯಕ್ಷ ಪುರುಷೋತ್ತಮ ಮಣಿಮಜಲು, ಪುರುಷೋತ್ತಮ ತಂಟೆಪ್ಪಾಡಿ, ಮಾಜಿ ಜಿ.ಪಂ.ಸದಸ್ಯೆ ಪುಷ್ಪಾವತಿ ಬಾಳಿಲ ಮತ್ತು ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಉಳ್ಳಾಕುಲು ದೈವ ನರ್ತಕರಾದ ಶೇಷಪ್ಪ ಪರವರಿಗೆ ಬೂಳ್ಯ ವಿತರಿಸಲಾಯಿತು. ಆರಂಭದಲ್ಲಿ ದೈವಕ್ಕೆ ಸಂಕ್ರಮಣ ತಂಬಿಲ ನಡೆಸಲಾಯಿತು. ದೈವದ ಪ್ರಧಾನ ಪಾತ್ರಿ ಲಕ್ಷ್ಮಣ ಬೇರಿಕೆ ದೇವತಾ ಪ್ರಾರ್ಥನೆ ನೆರವೇರಿಸಿದರು. ರುಕ್ಮಯ್ಯ ಗೌಡ ಕಳಂಜ ಸಹಕರಿಸಿದರು. ಜ. 20ರಂದು ಬೆಳಿಗ್ಗೆ 10.30ಕ್ಕೆ ಗೊನೆ ಕಡಿಯುವ ಕಾರ್ಯಕ್ರಮವಿದ್ದು ಬಳಿಕ ಉಗ್ರಾಣ ಮುಹೂರ್ತವು ನೆರವೇರಲಿದೆ.