ಸುಳ್ಯ: ಶ್ರಿ ರಾಮ್ ಫೈನಾನ್ಸ್ ನೂತನ ಶಾಖೆ ಸ್ಥಳಾಂತರಗೊಂಡು ಉದ್ಘಾಟನೆ, ವಿದ್ಯಾರ್ಥಿ ವೇತನ ವಿತರಣೆ

0

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿದ್ದ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಸುಳ್ಯದ ಕೆ. ಎಸ್. ಅರ್. ಟಿ. ಸಿ ಬಸ್ ನಿಲ್ದಾಣ ಬಳಿಯ ಸೂoತೋಡು ಎಂಪೋರಿಯಂ ಕಟ್ಟಡದ ಎರಡನೇ ಮಹಡಿಗೆ ಸ್ಥಳಾಂತರಗೊಂಡು ಫೆ. 14 ರಂದು ಉದ್ಘಾಟನೆಗೊಂಡಿತು.

ನೂತನ ಶಾಖೆಯಯನ್ನು ವಲಯ ವ್ಯವಹಾರ ಮುಖ್ಯಸ್ಥ ಶರಚ್ಚಂದ್ರ ಭಟ್ ಕಾಕುಂಜೆ ಉದ್ಘಾಟಿಸಿದರು. ವಲಯ ಉತ್ಪನ್ನ ಮುಖ್ಯಸ್ಥ ಚಂದ್ರಹಾಸ ಆಳ್ವ , ಪ್ರಾದೇಶಿಕ ವ್ಯಾಪಾರ ಮುಖ್ಯಸ್ಥ ಮಹೇಶ್ ಸಿ. ಹೆಚ್, ಪ್ರಾದೇಶಿಕ ವ್ಯಾಪಾರ ಮುಖ್ಯಸ್ಥ ಚೇತನ್ ಅರಸ್ , ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ಮಾಲೀಕ ಸೂರಯ್ಯ ಸೂಂತೋಡು , ಮತ್ತು ಡಾ. ರೇವಂತ್ ಸೂಂತೋಡು, ಬ್ರಾಂಚ್ ಮ್ಯಾನೇಜರ್ ಆನಂದ ಕೆ. ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.


ವಾಹನ ಚಾಲಕ ಮಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ
ಸುಳ್ಯದಲ್ಲಿ ಬಹುತೇಕ ಗ್ರಾಹಕರಿಗೆ ವೆಹಿಕಲ್ ಲೋನ್, ಬಿಸ್‌ನೆಸ್ ಲೋನ್ ನೀಡುತ್ತಿದ್ದ ಶ್ರೀರಾಮ್ ಫೈನಾ ನ್ಸ್ ಲಿಮಿಟೆಡ್ ಸತತ ೧೭ ವರ್ಷದಿಂದ ಗ್ರಾಹಕರ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು ನೂತನ ಶಾಖೆಯಲ್ಲಿ ಗೋಲ್ಡ್ ಲೋನ್ ಪ್ರಾರಂಭವಾಗಿದೆ. ವಾಹನ ಚಾಲಕ ಮಾಲಕರ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ನೀಡುತ್ತಿದೆ. ತಾಲೂಕು ಪಂಚಾಯತ್ ಸಭಾಂಗದಲ್ಲಿ ನಡೆಸಲಾಗಿದ್ದ ಕಾರ್ಯಕ್ರಮದಲ್ಲಿ ೮, ೯ ೧೦ ಮತ್ತು ಪಿ.ಯು.ಸಿ. ಯಲ್ಲಿ ೬೦ % ಹೆಚ್ಚು ಅಂಕವನ್ನು ಪಡೆದ ೨೪೬ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಧಿ ವಿತರಣಾ ಸಮಾರಂಭ ನಡೆಯಿತು.

ವಿದ್ಯಾರ್ಥಿ ನಿಧಿ ವಿತರಣಾ ಸಮಾರಂಭ ಕಾರ್ಯಕ್ರಮದ ಉದ್ಘಾಟನೆಯನ್ನು. ವಲಯ ವ್ಯವಹಾರ ಮುಖ್ಯಸ್ಥ ಶರಚ್ಚಂದ್ರ ಭಟ್ ಕಾಕುಂಜೆ ದೀಪ ಬೆಳಗಿಸಿ ಉದ್ಘಾಟಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ನಿಧಿ ವಿತರಣೆಯನ್ನು ಮಾಜಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ನಿರ್ವಹಿಸಿದರು. ಬಳಿಕ ಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಾರ್ಪಣೆ ಮಾಡಲಾಯಿತು.ಮುಖ್ಯ ಅತಿಥಿಗಳಾಗಿ ಸುಳ್ಯ. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕಿ ಸಂಧ್ಯಾ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಪರಮೇಶ್ವರಪ್ಪ , ಸುಳ್ಯ ತಾಲೂಕು ಚಾಲಕ – ಮಾಲಕ ಸಂಘದ ಅಧ್ಯಕ್ಷ ದಿನೇಶ್ ಅಡ್ಕಾರು, ದ. ಕ. ಜಿಲ್ಲಾ ಜೇನು ಬೆಳೆಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರು , ಎಂ. ಬಿ ಫೌಂಡೇಶನ್ , ಉದ್ಯಮಿ ಎಂ. ಬಿ ಸದಾಶಿವ, ಪಾಳೆಪ್ಪಾಡಿ ಐವರ್ನಾಡು ಪ್ರಗತಿಪರ ಕೃಷಿಕರಾದ ಜೋತ್ಸ್ನಾ ,ವಲಯ ಉತ್ಪನ್ನ ಮುಖ್ಯಸ್ಥ ಚಂದ್ರ ಹಾಸ ಆಳ್ವ , ಪ್ರಾದೇಶಿಕ ವ್ಯಾಪಾರ ಮುಖ್ಯಸ್ಥ ಮಹೇಶ್ ಸಿ. ಹೆಚ್, ಪ್ರಾದೇಶಿಕ ವ್ಯಾಪಾರ ಮುಖ್ಯಸ್ಥ ಚೇತನ್ ಅರಸ್ ,ಬ್ರಾಂಚ್ ಮ್ಯಾನೇಜರ್ ಆನಂದ .ಕೆ ಮತ್ತು ಸಿಬ್ಬಂದಿ ವರ್ಗ ತಾಲೂಕಿನ ಶಾಲೆಯ ವಿದ್ಯಾರ್ಥಿಗಳು , ಶಿಕ್ಷಕರು, ಪೋಷಕರು , ಗ್ರಾಹಕರು ಉಪಸ್ಥಿತರಿದ್ದರು. ಸುಳ್ಯ ವಿ. ಜೆ. ವಿಖ್ಯಾತ್ ಕಾರ್ಯ ಕ್ರಮ ನಿರೂಪಿಸಿದರು.