ರಾಜ್ಯಮಟ್ಟದ ಮ್ಯಾರಥಾನ್ ಸ್ಪರ್ಧೆಯಲ್ಲಿ ಶ್ರೀಮತಿ ವಿದ್ಯಾ ಬಂಗಾರಕೋಡಿ ಪ್ರಥಮ

0

ಚಿಕ್ಕಮಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಮ್ಯಾರಥಾನ್ ಸ್ಪರ್ಧೆಯ 10 ಕಿ.ಮೀ. ಓಟದಲ್ಲಿ ಪೆರಾಜೆಯ ಶ್ರೀಮತಿ ವಿದ್ಯಾ ಹರೀಶ್ ಬಂಗಾರಕೋಡಿ ಅವರು ಪ್ರಥಮ ಸ್ಥಾನ ಪಡೆದು, ಚಿನ್ನದ ಪದಕ, ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ಪಡೆದುಕೊಂಡಿದ್ದಾರೆ.

ಇವರು ಆಲೆಟ್ಟಿ ಗ್ರಾಮದ ರಂಗತ್ತಮಲೆ ಆರ್.ಕೂಸಪ್ಪ ಗೌಡ ಮತ್ತು ಆರ್.ಕೆ. ಸಣ್ಣಮ್ಮ ದಂಪತಿಯ ಪುತ್ರಿಯಾಗಿದ್ದು, ಪೆರಾಜೆ ಗ್ರಾಮದ ಬಂಗಾರಕೋಡಿ ಹರೀಶ್ ಅವರ ಪತ್ನಿ. ಈಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟದ ಸದಸ್ಯೆ. ತೊಡಿಕಾನದ ಆದಿಶಕ್ತಿ ಸ್ವಸಹಾಯ ಸಂಘದ ಸದಸ್ಯೆ ಹಾಗೂ ಸ್ವರ್ಣ ಸ್ತ್ರೀಶಕ್ತಿ ಸಂಘದ ಸದಸ್ಯೆಯಾಗಿದ್ದಾರೆ.