ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅನ್ನದಾನಕ್ಕಾಗಿ ಎಂಟು ಕ್ವಿಂಟಾಲು ಅಕ್ಕಿ ಕೊಡುಗೆ

0

ಬೆಂಗಳೂರಿನ ಚಂದಾಪುರದಲ್ಲಿ ವೈ.ಎಂ.ಆರ್.ಎಸ್ ಟ್ರಾನ್ಸ್ಪೋರ್ಟ್ ಉದ್ಯಮ ನಡೆಸುತ್ತಿರುವ ರಾಜು ಅವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅನ್ನದಾನಕ್ಕಾಗಿ ಎಂಟು ಕ್ವಿಂಟಾಲು ಅಕ್ಕಿ ಕೊಡುಗೆ ನೀಡಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ ಸೇವೆ ಸಲ್ಲಿಸಿ ಇಲ್ಲಿನ ಅನ್ನದಾನಕ್ಕಾಗಿ ಅಕ್ಕಿಯನ್ನು ಸುಬ್ರಹ್ಮಣ್ಯ ದೇವಾಲಯಕ್ಕೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ನಿಂಗಯ್ಯ ಮತ್ತು ಕಡಬ ತಾಲೂಕು ತಹಶೀಲ್ದಾರ್ ಪ್ರಭಾಕರ ಖಾಜುರೆ ಮತ್ತು ಸ್ಥಳೀಯರಾದ ರವಿಕಕ್ಕೆ ಪದವು ಮತ್ತು ಗೋಪಾಲ್ ಎಣ್ಣೆಮಜಲು, ದಾನಿಗಳ ಮಿತ್ರರಾದ ಶಿವಪ್ರಸಾದ್ ಹೊದ್ದಟ್ಟಿ ಉಪಸ್ಥಿತರಿದ್ದರು.