ಸೋಣಂಗೇರಿ: ಬಿಜೆಪಿ ವತಿಯಿಂದ ಮಹಾಸಂಪರ್ಕ ಅಭಿಯಾನ

0

ಕಾರ್ಯಕರ್ತರಿಂದ ಮನೆ – ಮನೆಗೆ ತೆರಳಿ ಮತಯಾಚನೆ

ಸುಳ್ಯ ಬಿಜೆಪಿ ಮಂಡಲದ ವತಿಯಿಂದ ಮಹಾಸಂಪರ್ಕ ಅಭಿಯಾನ ಕಾರ್ಯಕ್ರಮದ ಪ್ರಯುಕ್ತ ಜಾಲ್ಸೂರು ಗ್ರಾಮದ ಸೋಣಂಗೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಎ.21ರಂದು ಮತಯಾಚನೆ ನಡೆಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಾದ ಶಿವಪ್ರಸಾದ್ ನೀರಬಸಿರು, ಗಂಗಾಧರ ರೈ ಸೋಣಂಗೇರಿ, ದೇವರಾಜ್ ಕಲ್ಲಾಜೆ, ಗಣೇಶ್ ರೈ ಕುಕ್ಕಂದೂರು, ಸುಭಾಷ್ ರೈ ಕುಕ್ಕಂದೂರು, ಧನಂಜಯ ಕುಕ್ಕನ್ನೂರು, ಚಿದಾನಂದ ಗೋಪಾಲಕಜೆ, ಗಂಗಾಧರ ಹುಲಿಮನೆ, ಗೋಪಿನಾಥ್ ನೀರಬಸಿರು, ವೆಂಕಟ್ರಮಣ ಖಂಡಿಗೆ, ವಿನಯಚಂದ್ರ ನಡುಬೆಟ್ಟು, ಶಿವರಾಮ ಖಂಡಿಗೆ, ದಯಾನಂದ ಕಾಯರ, ವಿದಾತ್ ಹುಲಿಮನೆ, ಮೋಕ್ಷಿತ್ ಕಲ್ಲಾಜೆ, ವಿಶ್ವನಾಥ ಖಂಡಿಗೆ, ವೆಂಕಟೇಶ ನಡುಬೆಟ್ಟು, ಮೋಹನ್ ಖಂಡಿಗೆ ಹಿಮಕರ ಬಂಡಿಕೊಟ್ಟಿಗೆ, ನಯನ ಸೋನ , ಪ್ರವೀಣ್ ಹುಲಿಮನೆ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದು, ಮನೆ ಮನೆಗೆ ತೆರಳಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರ ಪರವಾಗಿ ಮತಯಾಚನೆ ನಡೆಸಿದರು.