ಕೂಟೇಲು ತರವಾಡು ಮನೆಯಲ್ಲಿ ಮಹಮ್ಮಾಯಿ ದೇವಿಯ ಪೂಜೆ-ವಿದ್ಯಾರ್ಥಿಗಳಿಗೆ ಉಚಿತ ‌ಪುಸ್ತಕ ವಿತರಣೆ

0

ಆಲೆಟ್ಟಿ ಗ್ರಾಮದ ಕೂಟೇಲು ನಿವೃತ್ತ ಎ.ಎಸ್.ಐ ಮೋಹನ ನಾಯ್ಕ್ ರವರ ತರವಾಡು ಮನೆಯಲ್ಲಿ
ಶ್ರೀ ಮಹಮ್ಮಾಯಿ ದೇವಿಯ ಅಂಗಾರೆ ಪೂಜೆಯು ನಡೆಯಿತು.


ಈ ಸಂದರ್ಭದಲ್ಲಿ ಕುಟುಂಬದ ಮಕ್ಕಳ
ವಿದ್ಯಾಭ್ಯಾಸಕ್ಕಾಗಿ ದೇವಿಯ ಸನ್ನಿಧಾನದಲ್ಲಿ ಪ್ರಾರ್ಥಿಸಿ ಪ್ರಾಥಮಿಕ ವಿಭಾಗದಲ್ಲಿ ಕಲಿಯುತ್ತಿರುವ ಸುಮಾರು 41 ವಿದ್ಯಾರ್ಥಿಗಳಿಗೆ ಮತ್ತು ಕಾಲೇಜಿನ 15 ವಿದ್ಯಾರ್ಥಿಗಳಿಗೆ
ಉಚಿತ ಪುಸ್ತಕಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕುಟುಂಬದ ಹಿರಿಯರು ಮತ್ತು ಸದಸ್ಯರು ಉಪಸ್ಥಿತರಿದ್ದರು.