ಪೆರುವಾಜೆ ಗುತ್ತು ದಿ.ಜಲದುರ್ಗ ರೈ ಯವರಿಗೆ ಶ್ರದ್ಧಾಂಜಲಿ – ವೈಕುಂಠ ಸಮಾರಾಧನೆ

0

ಪೆರುವಾಜೆ ಗ್ರಾಮದ ಪೆರುವಾಜೆ ಗುತ್ತು ಮನೆತನದ ಹಿರಿಯರಾದ ಜಲದುರ್ಗ ರೈ ಯವರು ಮೇ.02 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠಸಮಾರಾಧನೆ ಕಾರ್ಯಕ್ರಮವು ಮೇ.12 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಪ್ರದೀಪ್ ಕುಮಾರ್ ರೈ ಪನ್ನೆಯವರು ಪೆರುವಾಜೆಗುತ್ತು ದಿ.ಜಲದುರ್ಗಾ ರೈ ಯವರ ಆದರ್ಶ ಗುಣಗಳ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.
ಆಗಮಿಸಿದ ನೂರಾರು ಜನ ಗಣ್ಯರು ಜಲದುರ್ಗಾರೈಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರದಭದಲ್ಲಿ
ಪುತ್ರರಾದ ನಂದ ಕುಮಾರ್ ರೈ, ನಳಿನ್ ಕುಮಾರ್ ರೈ,
ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುನಿಲ್ ರೈ ಪೆರುವಾಜೆ, ಪುತ್ರಿ ಕಾರ್ತಿಕಾ ಶೆಟ್ಟಿ, ಸೊಸೆಯಂದಿರು,ಅಳಿಯ,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.