ಜಾಲ್ಸೂರು:ಸೇವಾ ಭಾರತಿ ಹೆಲ್ಪ್ ಲೈನ್ ಟ್ರಸ್ಟ್, ಗ್ರಾಮ ಪಂಚಾಯತ್ ವತಿಯಿಂದ ಸೋದರಿಗೊಂದು ಸೂರು ಸೇವಾಂಜಲಿ ನೂತನ ಮನೆಯ ಹಸ್ತಾಂತರ

0

ಸೇವಾ ಭಾರತಿ ಹೆಲ್ಪ್ ಲೈನ್ ಟ್ರಸ್ಟ್ ಮತ್ತು ಜಾಲ್ಸೂರು ಪಂಚಾಯತ್ ವತಿಯಿಂದ ನಿರ್ಮಾಣಗೊಂಡ ಸೋದರಿಗೊಂದು ಸೂರು ನೂತನ ಮನೆ “ಸೇವಾಂಜಲಿ” ಯ ಹಸ್ತಾಂತರ ಕಾರ್ಯಕ್ರಮವು
ಇಂದು ಬೆಳಗ್ಗೆ ಜಾಲ್ಸೂರಿನಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ಸೇವಾ ಭಾರತಿ ಹೆಲ್ಪ್ ಲೈನ್ ಟ್ರಸ್ಟ್ ಅಧ್ಯಕ್ಷ ಡಾ.ಮನೋಜ್ ಕುಮಾರ್ ಅಡ್ಡಂತಡ್ಕ ರವರು ವಹಿಸಿದ್ದರು.

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ರವರು ಮನೆಯ ಯಜಮಾನಿ ಶ್ರೀಮತಿ ಲಕ್ಷ್ಮೀಕುಂದ್ರುಕೋಡಿಯವರಿಗೆ ನೂತನ ಮನೆಯ ಕೀ ಯನ್ನು ಹಸ್ತಾಂತರಿಸಿದರು. ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ರವರು ಅಕ್ಕಿ ಮುಡಿಯನ್ನು ನೀಡಿದರು.


ಮುಖ್ಯ ಅತಿಥಿಗಳಾಗಿ ಎಸ್.ಆರ್.ಕೆ ಸಂಸ್ಥೆಯ ಮಾಲಕರು ಉದ್ಯಮಿ ಕೇಶವ ಅಮೈ, ಪಂಚಾಯತ್ ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ, ಆರ್.ಎಸ್.ಎಸ್. ತಾಲೂಕು ಸಂಘ ಚಾಲಕ ಚಂದ್ರಶೇಖರ ತಳೂರು, ಶ್ರೀಮತಿ ಲಕ್ಷ್ಮೀ ಕುಂದ್ರುಕೋಡಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪ್ರಾಸ್ತಾವಿಕ ಮಾತಿನೊಂದಿಗೆ ಡಾ.ಮನೋಜ್ ಕುಮಾರ್ ರವರು ಸ್ವಾಗತಿಸಿದರು. ಸೇವಾ ಭಾರತಿ ಉಪಾಧ್ಯಕ್ಷ ಆರ್.ಕೆ.ಭಟ್ ವರದಿ ವಾಚಿಸಿದರು. ಸಂಘದ ಲತೀಶ್ ಗುಂಡ್ಯ ವಂದಿಸಿದರು. ದೇವಿಪ್ರಸಾದ್ ಅರಂಬೂರು ಕಾರ್ಯಕ್ರಮ ನಿರೂಪಿಸಿದರು.