ಯಕ್ಷಗಾನ ಭಾಗವತೆ ಭವ್ಯಶ್ರೀ ಕುಲ್ಕುಂದ ಅವರಿಗೆ ದುಬೈಯಲ್ಲಿ ಸನ್ಮಾನ

0

ಖ್ಯಾತ ಯಕ್ಷಗಾನ ಭಾಗವತೆ ಶ್ರೀಮತಿ ಭವ್ಯಶ್ರೀ ಹರೀಶ್ ಕುಲ್ಕುಂದ ಅವರನ್ನು ದುಬೈಯಲ್ಲಿ ಇತ್ತೀಚೆಗೆ ಸನ್ಮಾನಿಸಲಾಯಿತು.

ಯಕ್ಷಗಾನ ಅಭ್ಯಾಸ ಕೇಂದ್ರ ಯ.ಎ.ಇ. ಇದರ ವತಿಯಿಂದ ನಡೆದ ದುಬೈ ಯಕ್ಷೋತ್ಸವದಲ್ಲಿ ಆಹ್ವಾನಿತರಾಗಿದ್ದ ಭವ್ಯಶ್ರೀ ಅವರನ್ನು ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಭವ್ಯಶ್ರೀ ಅವರ ಪತಿ ಹರೀಶ್ ಕುಲ್ಕುಂದ, ಮಗ ಅಗಸ್ತ್ಯ ಕೂಡಾ ಸನ್ಮಾನ ಸ್ವೀಕರಿಸಿದರು.

ಗ್ರೀನ್ ಹೀರೋ ಆಫ್ ಇಂಡಿಯಾ ಡಾ. ಆರ್.ಕೆ.ನಾಯರ್ ಅವರು ಕೂಡಾ ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದರು.

ಹರೀಶ್ ಕೋಡಿ, ಸುರೇಶ್ ಕುಂಪಲ, ಸುನಿಲ್ ಮೊಟ್ಟೆಮನೆ, ಗಣೇಶ್ ಅಚ್ಚಂಡಿರ, ರೋಶನ್ ಕಂಪ, ಸುಪ್ರೀತ್ ಕುಂಡಡ್ಕ, ಮೀನಾ ಹರೀಶ್ ಕೋಡಿ, ಸುಪ್ರೀತ ಸುರೇಶ್, ಅಮಿತಾ ಸುನಿಲ್, ರಕ್ಷಿತಾ ಸುಪ್ರೀತ್ ಮೊದಲಾದವರು ಉಪಸ್ಥಿತರಿದ್ದರು.