ಗೌಡರ ಯುವ ಸೇವಾ ಸಂಘ – ತಾ| ಮಹಿಳಾ ಘಟಕ ರಚನೆ : ಅಧ್ಯಕ್ಷರಾಗಿ ಶ್ರೀಮತಿ ವಿನುತಾ ಪಾತಿಕಲ್ಲು ಆಯ್ಕೆ

0

ಗೌಡರ ಯುವ ಸೇವಾ ಸಂಘ ಸುಳ್ಯ ಇದರ ತಾಲೂಕು ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ಶ್ರೀಮತಿ ವಿನುತಾ ಹರೀಶ್ಚಂದ್ರ ಪಾತಿಕಲ್ಲು, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಸವಿತಾ ಸಂದೇಶ್ ಸೂಂತೋಡು, ಕೋಶಾಧಿಕಾರಿಯಾಗಿ ಶ್ರೀಮತಿ ಜಯಶ್ರೀ ರಾಮಚಂದ್ರ ಪಲ್ಲತ್ತಡ್ಕ ಆಯ್ಕೆಯಾಗಿದ್ದಾರೆ.
ಜು.೨೦ರಂದು ಸುಳ್ಯದ ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮದುವೆಗದ್ದೆ ಭೋಜಪ್ಪ ಗೌಡ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷರುಗಳಾಗಿ ಜಯಲಕ್ಷ್ಮಿ ಜನಾರ್ಧನ ಗೌಡ ನಾರ್ಕೋಡು, ಯೋಗಿತಾ ಗೋಪಿನಾಥ್, ತಾರಾ ಮಾಧವ ಗೌಡ ಬೆಳ್ಳಾರೆ, ಮೀನಾಕ್ಷಿ ಸುಂದರ ಗೌಡ ರಾಮಕಜೆ ಸುಳ್ಯ, ಚಂದ್ರಾವತಿ ಹೊನ್ನಪ್ಪ ಗೌಡ ಚಿದ್ಗಲ್, ಕಾರ್ಯದರ್ಶಿಗಳಾಗಿ ಶಶಿಕಲ ದೇರಪ್ಪಜ್ಜನಮನೆ, ಬೀನಾ ಕರುಣಾಕರ ಅಡ್ಪಂಗಾಯ, ಶೀಲಾ ಕುರುಂಜಿ, ಪುಷ್ಪಾ ಮೇದಪ್ಪ ಉಳುವಾರು, ಪೂರ್ಣಿಮ ಪಾನತ್ತಿಲ, ನಿರ್ದೇಶಕರುಗಳಾಗಿ ಚಂಚಲಾಕ್ಷಿ ಐವರ್ನಾಡು, ಲತಾ ಕುದ್ಪಾಜೆ, ಕುಸುಮ ಕೊಳೆಂಜಿರೋಡಿ, ರೀನಾ ಚೋಡಿಪಣೆ, ಮಾಲತಿ ಭೋಜಪ್ಪ ಗೌಡ ತೊಡಿಕಾನ, ರೇಷ್ಮಾ ಕಟ್ಟೆಮನೆ, ಹೇಮಲತಾ ದೇಂಗೋಡಿ, ಕೃಪಾ ಎನ್. ಅಡ್ಕಬಳೆ, ಶೈಲಾ ದಿವಾಕರ, ವಾರಿಜಾ ಕುರುಂಜಿ ಆಯ್ಕೆಯಾದರು.

ಮಹಿಳಾ ಘಟಕದ ಅಧ್ಯಕ್ಷ ಶ್ರೀಮತಿ ಪುಷ್ಪಾ ಮಾಣಿಬೆಟ್ಟು ರವರು ಅಧ್ಯಕ್ಷತೆ ವಹಿಸಿದ್ದರು.
ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ್, ಸ್ಥಾಪಕಾಧ್ಯಕ್ಷ ನಿತ್ಯಾನಂದ ಮುಂಡೋಡಿ, ಮಾಜಿ ಅಧ್ಯಕ್ಷರುಗಳಾದ ದಿನೇಶ್ ಮಡಪ್ಪಾಡಿ, ಚಂದ್ರಾ ಕೋಲ್ಚಾರ್, ಪ್ರಧಾನ ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆ, ಎಂ.ಜಿ.ಎಂ. ಶಾಲಾ ಸಂಚಾಲಕ ದೊಡ್ಡಣ್ಣ ಬರೆಮೇಲು, ಅರೆಭಾಷೆ ಅಕಾಡೆಮಿ ಸದಸ್ಯ ಡಾ.ಎನ್.ಎ.ಜ್ಞಾನೇಶ್, ತರುಣ ಘಟಕ ಟಕ ಅಧ್ಯಕ್ಷರಾದ ರಜತ್ ಅಡ್ಕಾರು ಇದ್ದರು.