ಕೇರ್ಪಡ: ಶ್ರೀ ವರಮಹಾಲಕ್ಷ್ಮಿ ವಾರ್ಷಿಕ ಸಭೆ ಸಮಿತಿ ರಚನೆ

0


ಕೇರ್ಪಡ ಶ್ರೀ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ವ್ಯ ಸಮಿತಿ ಅಧ್ಯಕ್ಷ ವಸಂತ ನಡುಬೈಲುರವರ ಅಧ್ಯಕ್ಷತೆಯಲ್ಲಿ ದೇವಳದ ವಠಾರ ದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜಸಮಿತಿಯ ವಾರ್ಷಿಕ ಸಭೆ ನಡೆದು ನೂತನ ಸಮಿತಿ ರಚನೆಗೊಂಡಿತು.

ಸಂಚಾಲಾಕರಗಿರುವ ಶಾಸಕಿ ಕು. ಭಾಗೀರಥಿ ಮುರುಳ್ಯರವರ ನಿರ್ದೇಶನದಂತೆ ಗೌರವ ಅಧ್ಯಕ್ಷರಾಗಿ ಶ್ರೀಮತಿ ಗುಣವತಿ ನಾವೂರು, ಅಧ್ಯಕ್ಷರಾಗಿ ಶ್ರೀಮತಿ ವೀಣಾ ತಾರಾನಾಥ್ ಕರಿಂಬಿಲ, ಉಪಾಧ್ಯಕ್ಷರಾಗಿ ಕವಿತಾ ಪೂರ್ಣಚಂದ್ರ ಕರಿಂಬಿಲ, ಕಾರ್ಯದರ್ಶಿಯಾಗಿ ಶ್ರೀಮತಿ ಸವಿತ ಕರಿಂಬಿಲ, ಖಜಾಂಜಿಯಾಗಿ ಶ್ರೀಮತಿ ರೇವತಿ ರಘುನಾಥ್ ಎಂಜೀರ್, ಸದಸ್ಯರಾಗಿ ಶ್ರೀಮತಿ ಭವಾನಿ, ಶ್ರೀಮತಿ ಗೀತ, ಶ್ರೀಮತಿ ಕಮಲಾಕ್ಷಿ, ಶ್ರೀಮತಿ ಗಿರಿಜಾ ಹಾಗೂ ಮಹಿಳಾ ಸೇವಾ ಸಮಿತಿಯ ಎಲ್ಲಾ ಸದಸ್ಯರುಗಳ ಗೌರವ ಸಲಹೆಗಾರರಾಗಿ ಶ್ರೀಮತಿ ಭಾಗ್ಯ ಪ್ರಸನ್ನ ಕೆ., ಶ್ರಿಮತಿ ಗುಣವತಿ ನಾವೂರು, ಶ್ರೀ ಮತಿ ವಾರಿಜಾಕ್ಷಿ ಕೇರ್ಪಡ, ಶ್ರೀಮತಿ ಲೀಲಾವತಿ ಮಿಲ್ಕ್ ಮಾಸ್ಟರ್, ಶ್ರೀ ಮತಿ ಭವಾನಿ ಶಿವನಂದ ಬೊಲ್ಕಜೆಯವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರು, ಸೇವಾ ಸಮಿತಿ ಸದಸ್ಯರು, ಕೇರ್ಪಡ ಕೂಡುಕಟ್ಟಿನ ಸದಸ್ಯರು ಉಪಸ್ಥಿತರಿದ್ದರು.