ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ಕೊಲ್ಲಮೊಗ್ರದಲ್ಲಿ ಕಾರ್ಗಿಲ್ ದಿನಾಚರಣೆ

0

ಸಭೆಯ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನ ಅಧ್ಯಕ್ಷ ರಾಜೇಶ್ ಎನ್ .ಎಸ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಲಯ ಅಧ್ಯಕ್ಷ ರಂಗಯ್ಯ ಶೆಟ್ಟಿಗಾರ್, ಕೆ.ವಿ.ಜಿ ಅ.ಪ್ರೌ.ಶಾಲೆ ಕೊಲ್ಲಮೊಗ್ರು ಇದರ ಮುಖ್ಯೋಪಾಧ್ಯಾಯ ಸುರೇಶ್, ಲಯನ್ಸ್ ನಿಕಟ ಪೂರ್ವ ಅಧ್ಯಕ್ಷ ರಾಮಚಂದ್ರ ಪಳಂಗಾಯ, ಕಾರ್ಯದರ್ಶಿ ಕೃಷ್ಣಕುಮಾರ್, ಖಜಾಂಜಿ ಮೋಹನ್ ದಾಸ್ ರೈ ಉಪಸ್ಥಿತರಿದ್ದರು.
ಈ ಸಂದರ್ಭ ಮಾಜಿ ಸೈನಿಕರಾದ ಸೋಮಶೇಖರ್ ಮಾವಜಿ, ಸತೀಶ್ ಜಿ ಜಾಲುಮನೆ, ಪದ್ಮನಾಭ ಗೊಳ್ಯಾಡಿ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ದೀಪಕ್ ನಂಬಿಯರ್ ಕಾರ್ಯಕ್ರಮ ನಿರೂಪಿಸಿದರು.‌
ಕಾರ್ಯದರ್ಶಿ ಕೃಷ್ಣಕುಮಾರ್ ಬಾಳುಗೋಡು ಸ್ವಾಗತಿಸಿದರು.
ಕೆ ಆರ್ ಶೆಟ್ಟಿಗಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಮೋಹನ್ ದಾಸ್ ರೈ ಧನ್ಯವಾದ ಅರ್ಪಿಸಿದರು.