ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

0

ಸುಳ್ಯ ಶ್ರೀರಾಂ ಪೇಟೆಯ ವೀರ ಕೇಸರಿ ಆಟೋ ನಿಲ್ದಾಣದ ಆಟೋ ಚಾಲಕ ನಾರಾಯಣ ಎಸ್.ಎಂ. ಇವರ ಆಟೋದಲ್ಲಿ ಪ್ರಯಾಣಿಸಿದ್ದ ಅಜ್ಜಾವರ ಮಹಿಳೆಯೊಬ್ಬರು ರಿಕ್ಷಾದಲ್ಲಿ ಬಿಟ್ಟು ಹೋಗಿದ್ದ ಬೆಲೆ ಬಾಳುವ ಮೊಬೈಲ್ ಅನ್ನು ಹಿಂತಿರುಗಿಸಿ ನಾರಾಯಣರು ಪ್ರಾಮಾಣಿಕತೆ ಮೆರೆದಿದ್ದಾರೆ.

ನಾರಾಯಣರು ಬಿಜೆಪಿಯ ಸುಳ್ಯ ನಗರ ಮಹಾ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.