ಮರ್ಕಂಜ : ಬಾವಿ ಅಗೆತ ಕಾರ್ಯಚರಣೆ ನಾಳೆಗೆ ಮುಂದೂಡಿಕೆ

0

ಮರ್ಕಂಜದ ಮಿತ್ತಡ್ಕದ ಮೋಹನರವರ ಪತ್ನಿ ಶೋಭಾಲತಾ ಎಂಬವರು ಕಾಣೆಯಾದ ಹಿನ್ನೆಲೆಯಲ್ಲಿ ಬಾವಿಗೆ ಹಾರಿರಬಹುದೆಂಬ ಅನುಮಾನದಿಂದ ಬಾವಿಯನ್ನು ಅಗೆದು ನೋಡುವ ಕಾರ್ಯಚರಣೆ ಇಂದು ನಡೆಯುತ್ತಿದ್ದು ಇದೀಗ ಕೆಲಸ ಸ್ಥಗಿತಗೊಳಿಸಿದ್ದಾರೆ.

ಇಂದು ಮಧ್ಯಾಹ್ನ ಸುಮಾರು 11 ಗಂಟೆಯಿಂದ ಮೋಹನ ರವರ ಮನೆಯ ಬಳಿ ಇರುವ ಬಾವಿಯಿಂದ ಮಣ್ಣು ತೆಗೆಯಲು ಬಾವಿಯ ಒಂದು‌ ಭಾಗದಿಂದ ಹಿಟಾಚಿ ಯಂತ್ರದ ಮೂಲಕ‌ ಅಗೆಯಲು‌ ಆರಂಭಿಸಲಾಯಿತು. ‌ಇದೀಗ ಬಾವಿಯ ಅರ್ಧ ಭಾಗದಷ್ಟು ಅಗೆಯುವ ಕಾರ್ಯಚರಣೆ ನಡೆದಿದೆ. ಇದೀಗ ರಾತ್ರಿ ಆದ ಕಾರಣ ಕೆಲಸ‌ ಸ್ಥಗಿತಗೊಳಿಸಿದ್ದಾರೆ. ನಾಳೆ ಮುಂದುವರಿಯುವುದಾಗಿ ತಿಳಿದು ಬಂದಿದೆ. ಸ್ಥಳದಲ್ಲಿ ಹರೀಶ್ ಕಂಜಿಪಿಲಿ ಸೇರಿದಂತೆ ಪಂಚಾಯತ್ ಅಧ್ಯಕ್ಷರು, ‌ಪೋಲೀಸ್ ಸಿಬ್ಬಂದಿಗಳು, ಊರವರು ಸೇರಿದ್ದರು.‌