ಮಿತ್ತಡ್ಕ : ಧರ್ಮಸ್ಥಳ ಸಂಘದ ವತಿಯಿಂದ ಸಹಾಯಧನ‌ ವಿತರಣೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪಾಜೆ ವಲಯದ ಮಿತ್ತಡ್ಕ ಕಾರ್ಯಕ್ಷೇತ್ರದ ತನುಶ್ರೀ ಸಂಘದ ಸದಸ್ಯೆಯಾದ ಶ್ರೀಮತಿ ಹೇಮಾವತಿಯವರ ಮನೆಗೆ ಇತ್ತೀಚೆಗೆ ಸುರಿದ ಭಾರಿ ಮಳೆಯ ಸಂದರ್ಭ ಬೃಹದಾಕಾರದ ಮರ ಬಿದ್ದು ಮನೆಗೆ ಸಂಪೂರ್ಣ ಹಾನಿಯಾಗಿತ್ತು. ಈ ಸಂದರ್ಭದಲ್ಲಿ ಸಹಾಯಧನಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಮನವಿ ಸಲ್ಲಿಸಿದ್ದು, ಯೋಜನೆಯ ಮೂಲಕ ಪ್ರಕೃತಿ ವಿಕೋಪ ದಡಿಯಲ್ಲಿ ಕ್ಷೇತ್ರದಿಂದ ರೂಪಾಯಿ 15,000 ಮಂಜೂರು ಗೊಂಡಿದ್ದು ಮಂಜುರಾತಿ ಪತ್ರವನ್ನು ಫಲಾನುಭವಿಯ ಮನೆ ಭೇಟಿ ಮಾಡಿ ನೀಡಲಾಯಿತು.

ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಗಂಗಾಧರ , ಮರ್ಕಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಹೊಸೊಳಿಕೆ, ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು , ಶ್ರೀ ಸಾಸ್ತಾವು ಯುವಕ ಮಂಡಲದ ಸದಸ್ಯರು, ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ, ಉಪಸ್ಥಿತರಿದ್ದರು. ಫಲಾನುಭವಿ ಹೇಮಾವತಿ ಹಾಗೂ ಅವರ ಮಗ ತೇಜಸ್ಸು ಜೊತೆಯಾಗಿ ಮಂಜೂರಾತಿ ಪತ್ರ ಸ್ವೀಕರಿಸಿದರು.