ಗಾಯಕ, ಜ್ಯೋತಿಷಿ ಎಚ್. ಭೀಮರಾವ್ ವಾಷ್ಠರ್ ಸುಳ್ಯ ಅವರಿಗೆ ಬೆಂಗಳೂರಲ್ಲಿ ಗೌರವ ಸಮ್ಮಾನ

0

ಬೆಂಗಳೂರಿನ ರಂಗನಾಯಕಿ ಮೆಲೋಡಿಸ್ ಸಾಂಸ್ಕೃತಿಕ ವೇದಿಕೆ ವತಿಯಿಂದ ಇತ್ತೀಚಿಗೆ ಬೆಂಗಳೂರಿನ ರಾಜಾಜಿನಗರದ ಎಸ್ ಜಿ ಆರ್ ಕಲಾ ಮಂಟಪದಲ್ಲಿ ಸುಳ್ಯದ ಖ್ಯಾತ ಜ್ಯೋತಿಷಿ, ಸಾಹಿತಿ, ಗಾಯಕ ಮತ್ತು ಸಂಘಟಕರಾದ ಎಚ್. ಭೀಮರಾವ್ ವಾಷ್ಠರ್ ಅವರನ್ನು ರಾಜ್ಯಮಟ್ಟದ ಸಂಗೀತ ಸಮಾರಂಭದ ವೇದಿಕೆಯಲ್ಲಿ ಸಮ್ಮಾನಿಸಿ ಗೌರವಿಸಿದರು.

ಭೀಮರಾವ್ ವಾಷ್ಠರ್ ಅವರು ವೇದಿಕೆಯಲ್ಲಿ ಚಿತ್ರರಂಗದ ಗಣ್ಯರ ಸಮಕ್ಷಮ ಭಕ್ತಿಗೀತೆ ಮತ್ತು ತತ್ವಪದಗಳನ್ನು ಹಾಡಿ ಎಲ್ಲರ ಮನಸ್ಸು ಗೆದ್ದಿದ್ದರು. ಕಾರ್ಯಕ್ರಮ ಸಂಯೋಜಕಿಯವರಾದ ಚಿತ್ರನಟಿ ಮತ್ತು ಗಾಯಕಿಯಾದ ಪ್ರಿಯಾಂಕ, ಸಂಗೀತ ಕ್ಷೇತ್ರದ ಖ್ಯಾತ ಗಾಯಕರು, ಸ್ಪರ್ಧಾ ನಿರ್ಣಾಯಕರು, ರಾಜ್ಯದ ಅನೇಕ ಗಾಯಕರು ಇನ್ನಿತರರು ಉಪಸ್ಥಿತರಿದ್ದರು.