ಕುಕ್ಕಟ್ಟೆ : ಶ್ರೀ ಕ್ಷೇತ್ರ ಕಾಳಿಕಾ ಪರಮೇಶ್ವರಿ ಭದ್ರಕಾಳಿ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಮಹೋತ್ಸವ

0

ಶ್ರೀ ಕ್ಷೇತ್ರ ಕಾಳಿಕಾ ಪರಮೇಶ್ವರಿ ಭದ್ರ ಕಾಳಿ ದೇವಸ್ಥಾನದಲ್ಲಿ ಸೆಪ್ಟೆಂಬರ್ 3ರಂದು ನವರಾತ್ರಿ ಪೂಜಾ ಮಹೋತ್ಸವ ಆರಂಭಗೊಂಡಿತು.

ಅನುವಂಶಿಕ ಆಡಳಿತ ಮೊಕೇಸ್ತರಾದ ಚಿನ್ನಯ್ಯ್ ಆಚಾರ್ಯರ ಉಪಸ್ಥಿತಿಯಲ್ಲಿ ಬಾಲಕೃಷ್ಣ ಪುರೋಹಿತರ ಪೌರೋತ್ಯದಲ್ಲಿ ನಡೆಯಿತು.

ಬಳಿಗ್ಗೆ ಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಸಂಜೆ ಭಜನ ಕಾರ್ಯಕ್ರಮ ರಾತ್ರಿ ವಿವಿಧ ಸೇವಾ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಆಡಳಿತ ಸಮಿತಿ ಅಧ್ಯಕ್ಷ ಬಾಲಕೃಷ್ಣ ಮರೋಲಿ, ಕಾರ್ಯದರ್ಶಿ ಪುರುಷೋತಮ ಆಚಾರ್ಯ, ಸದಸ್ಯರು, ಸೇವಾಸಮಿತಿ ಪದಾಧಿಕಾರಿಗಳು ಊರವರು ಉಪಸ್ಥಿತರಿದ್ದರು.