ನಾವೂರು: ನಾಗ ಸಾನಿಧ್ಯದ ಜೀರ್ಣೋದ್ಧಾರ ಕುರಿತು ಪ್ರಶ್ನಾ ಚಿಂತನೆ

0

ನಾವೂರು ಕಲ್ಕುಡ ‌ದೈವಸ್ಥಾನದಲ್ಲಿ‌ ದೈವಜ್ಞರ ಮುಖೇನ ಇರಿಸಿದ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ನಾವೂರು ಎಂಬಲ್ಲಿ ಅನಾದಿ ಕಾಲದಿಂದಲೂ ಆರಾಧಿಸಲ್ಪಡುತ್ತಿದ್ದ ನಾಗ ಸಾನಿಧ್ಯವನ್ನು ಜೀರ್ಣೋದ್ಧಾರಗೊಳಿಸುವ ಸಲುವಾಗಿ ನಾವೂರು ಪಾರ್ವತಿ ಶೀನಪ್ಪ ರೈ ಯವರ ಮನೆಯಲ್ಲಿ ನಾಗ ಸಾನಿಧ್ಯದ ಸ್ಥಳದಲ್ಲಿ ಫೆ.14 ರಂದು ಪ್ರಶ್ನಾ ಚಿಂತನೆಯನ್ನು ಇರಿಸಲಾಯಿತು.
ಈ ಸಂದರ್ಭದಲ್ಲಿ ಕಲ್ಕುಡ ದೈವಸ್ಥಾನದ ಧರ್ಮದರ್ಶಿ ಉಮೇಶ್ ಪಿ.ಕೆ ಹಾಗೂ ಧರ್ಮದರ್ಶಿ ಮಂಡಳಿಯ ಸದಸ್ಯರು, ಪರಿಸರದ ಭಕ್ತಾದಿಗಳು ಉಪಸ್ಥಿತರಿದ್ದರು