ದ.ಕ.ಜಿಲ್ಲಾ ವಕ್ಪ್ ಬೋರ್ಡ್ ಸಮಿತಿ ಉಪಾಧ್ಯಕ್ಷರಾಗಿ ಅಬ್ದುಲ್‌ ರಹಿಮಾನ್ ಮೊಗರ್ಪಣೆ ಆಯ್ಕೆ

0

ಕರ್ನಾಟಕ ರಾಜ್ಯ ವಕ್ಪ್ ಬೋರ್ಡ್ ಇದರ ದ.ಕ ಜಿಲ್ಲಾ ಸಮಿತಿ ಉಪಾಧ್ಯಕ್ಷರಾಗಿ ಅಬ್ದುಲ್‌ ರಹಿಮಾನ್ ಮೊಗರ್ಪಣೆಯವರು ಆಯ್ಕೆಯಾಗಿದ್ದಾರೆ.


ಸುಳ್ಯ ಮೊಗರ್ಪಣೆ ನಿವಾಸಿ ಯಾಗಿದ್ದು ಮೊಗರ್ಪಣೆ ಮಸೀದಿ ಜಮಾಯತ್ ಕಮಿಟಿ ನಿರ್ದೇಶಕರಾಗಿ, ಕರ್ನಾಟಕ ಸುನ್ನಿ ಸ್ಟೂಡೆಂಟ್ ಫೆಡರೇಶನ್ ರಾಷ್ಟ್ರೀಯ ಸಮಿತಿ ಕೌನ್ಸಿಲ್ ಸದಸ್ಯರಾಗಿ,ಕರ್ನಾಟಕ ಮುಸ್ಲಿಂ ಜಮಾಯತ್ ರಾಜ್ಯ ಸಮಿತಿ ಸದಸ್ಯರಾಗಿ,ಸುಳ್ಯ ರೋಟರಾಕ್ಟ್ ಕ್ಲಬ್ ಮಾಜಿ ಅಧ್ಯಕ್ಷರಾಗಿ, ಸುಳ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ನಿರ್ದೇಶಕರಾಗಿ, ಕಿಪ್ ಫಿಟ್ ಹೆಲ್ತ್ ಕ್ಲಬ್ ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಯಾಗಿ, ಬೆಳ್ಳಾರೆ ತಂಬಿನಮಕ್ಕಿ ದಾರಲ್ ಹುದಾ ತಂಬಿನಮಕ್ಕಿ ವಿದ್ಯಾಸಂಸ್ಥೆ ಸಮಿತಿ ನಿರ್ದೇಶಕರಾಗಿ ಸೇವೆಸಲ್ಲಿಸಿದ್ದಾರೆ.
ಸುಳ್ಯ ಹಳೇಗೆಟು ಬಳಿ ಮೊಗರ್ಪಣೆ ಮೊಗರ್ಪಣೆ ಎಂಟರ್ಪ್ರೈಸಸ್ ಸಂಸ್ಥೆಯನ್ನು ನಡೆಸುತ್ತಿದ್ದಾರೆ.