ಉಬರಡ್ಕ: ಸುದ್ದಿ ಸ್ವಾತಂತ್ರ್ಯ ರಥಕ್ಕೆ ಸ್ವಾಗತ ಕೋರಿದ ಗ್ರಾಮಸ್ಥರು

0

 

ಉಬರಡ್ಕಕ್ಕೆ ಸುದ್ದಿ ಸ್ವಾತಂತ್ರ್ಯ ರಥವು ಆಗಮಿಸಿದಾಗ ಗ್ರಾಮದ ನಿವಾಸಿಗಳು ಸ್ವಾಗತಿಸಿದರು.
ಈ ಬಾರಿಯ 75ನೇ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ಪ್ರಯುಕ್ತ ಮನೆ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಬೇಕೆಂಬ ಸಂದೇಶವನ್ನು ಸಾರುವ ಸಲುವಾಗಿ ಸುದ್ದಿ ಸ್ವಾತಂತ್ರ್ಯ ರಥವು ಗ್ರಾಮಗ್ರಾಮಗಳಲ್ಲಿ ಸಂಚರಿಸುತ್ತಿದೆ.
ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಮಾತನಾಡಿದರು. ಊರವರಾದ ಅನಿಲ್ ಬಳ್ಳಡ್ಕ, ಶುಭಕರ ಉಬರಡ್ಕ, ವಿನಯಕುಮಾರ್ ಉಬರಡ್ಕ,ಚಿದಾನಂದ ಉಬರಡ್ಕ,ಲೋಕೇಶ್ ಪಟ್ರಕೋಡಿ,ಧನಂಜಯ ಭರ್ಜರಿಗುಂಡಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸುದ್ದಿಯ ರಮೇಶ್ ನೀರಬಿದಿರೆ, ಶಿವಪ್ರಸಾದ್ ಕೇರ್ಪಳ,ರೇಖಾ ಸುಭಾಸ್,ಕಾರ್ತಿಕ್ ಉಪಸ್ಥಿತರಿದ್ದರು.