ಸುಬ್ರಹ್ಮಣ್ಯ ಕೆ ಎಸ್ ಎಸ್ ಕಾಲೇಜಿನಲ್ಲಿ ಷೇರು ಮಾರುಕಟ್ಟೆ ಹೂಡಿಕೆಯ ಮಾಹಿತಿ ಕಾರ್ಯಾಗಾರ

0

.

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಮಣ್ಯ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ ಶೇರು ಮಾರುಕಟ್ಟೆಯ ಹೂಡಿಕೆಯ ಬಗ್ಗೆ ಒಂದು ದಿನದ ಮಾಹಿತಿ ಕಾರ್ಯಾಗಾರವನ್ನು ಆ.18ರಂದು  ಕಾಲೇಜಿನ ಸ್ಮಾರ್ಟ್ ರೂಂನಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಪಿಟಿ ವಹಿಸಿದರು.ವಾಣಿಜ್ಯ ಉಪನ್ಯಾಸಕರಾದ ರಮಾನಾಥ್ ಕಾರ್ಯಕ್ರಮವನ್ನು ಸಂಯೋಜಿಸಿದರು, ಕಾರ್ಯಕ್ರಮವನ್ನು ವಾಣಿಜ್ಯಶಾಸ್ತ್ರ ಉಪನ್ಯಾಸಕಿಯಾಗಿರುವ ಪ್ರಮೀಳಾ ಎನ್ ನಿರ್ವಹಿಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮೋಹಿತ್ ಎಂಬಿಎ ,AMFI , (ಬಿಜಿನೆಸ್ ಪಾರ್ಟ್ನರ್ ಮೋತಿಲಾಲ್ ಓಸ್ವಲ್ ಪ್ರೈವೇಟ್ ಲಿಮಿಟೆಡ್) ಮತ್ತು ಜೀವನ್ ಇವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾಲೇಜು ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಲತಾಬೀಟಿ, ಡಾ. ನೀತುಸೂರಜ್, ಶ್ರೀಮತಿ ರಮ್ಯ ಎಂ ಇವರು ಭಾಗವಹಿಸಿದರು, ಕಾರ್ಯಕ್ರಮವನ್ನು ಪ್ರಥಮ ಬಿಎ ಪದವಿ ಮತ್ತು ಹೂಡಿಕೆಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಭಾಗವಹಿಸಿದ್ದರು.