ಬಾಳಿಲ ಗ್ರಾ.ಪಂ.ನಲ್ಲಿ ಮಳೆ ನೀರು ಕೊಯ್ಲು ಘಟಕ ಮತ್ತು ಬೂದು ನೀರು ನಿರ್ವಹಣೆ ಸೌಲಭ್ಯ ಕುರಿತು ಪ್ರೇರೇಪಣಾ ಕಾರ್ಯಕ್ರಮ

0

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ದ.ಕ ಜಿಲ್ಲಾ ಪಂಚಾಯತ್ ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆ ಗ್ರಾಮ್ಸ್ ಮಂಗಳೂರು ಇವರ ಸಹಯೋಗದಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಬಾಳಿಲ ಗ್ರಾಮ ಪಂಚಾಯತ್ ನಲ್ಲಿ ಮಳೆ ನೀರು ಕೊಯ್ಲು ಘಟಕ ಮತ್ತು ಬೂದು ನೀರು ನಿರ್ವಹಣೆ ಸೌಲಭ್ಯ ಕುರಿತು ಪ್ರೇರೇಪಣಾ ಕಾರ್ಯಕ್ರಮ ಸೆ. 14ರಂದು ಆಯೊಜಿಸಲಾಗಿತು.

ತರಬೇತಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸವಿತಾ ಕೆ, ಉಪಾಧ್ಯಕ್ಷರಾದ ತ್ರಿವೇಣಿ ಕೆ ವಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಿ. ಹೂವಪ್ಪ ಗೌಡ, ಪಂಚಾಯತ್ ಸದಸ್ಯರಾದ ರಮೇಶ್ ರೈ, ರವೀಂದ್ರ ರೈ, ಜೆ ಹರ್ಷ, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಸ್ವ ಸಹಾಯ ಸಂಘದ ಸದಸ್ಯರು, ಗ್ರಾಮಸ್ಥರು, ಸೇರಿ ಒಟ್ಟು 35ಮ೦ದಿ ಭಾಗವಹಿಸಿದ್ದರು. ಮಳೆ ನೀರು ಕೊಯ್ಲು ಘಟಕ‌ ಮತ್ತು ಬೂದು ನೀರು ನಿರ್ವಹಣೆ ಸೌಲಭ್ಯದ ಬಗ್ಗೆ ಅನುಷ್ಟಾನ ಬೆಂಬಲ ಸಂಸ್ಥೆ ಗ್ರಾಮ್ಸ್ ಸಿಬ್ಬಂದಿಗಳಾದ ಅಭಿಲಾಷ್ ಕೆ.ಎಲ್ ಹಾಗೂ ಘೋಷಿತ್ ಮತ್ತು ಯೆನ್. ಆರ್. ಎಲ್.ಎಮ್ ನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ರೀಮತಿ ಶ್ವೇತಾ ವಿ.ಜಿ ಯವರು ಮಾಹಿತಿ ನೀಡಿದರು.