ಐನೆಕಿದು : ಕೊಪ್ಪಲಗದ್ದೆಯಲ್ಲಿ  ದನದ ರುಂಡ ಬಿಸಾಡಿದ ಗೋಮುಖ ವ್ಯಾಘ್ರರು

0

ಐನೆಕಿದು ಗ್ರಾಮದ ಕೊಪ್ಪಲಗದ್ದೆ ಸೇತುವೆ ಬಳಿ ಗೋಣಿ ಚೀಲದಲ್ಲಿ ಕಟ್ಟಿದ  ದನದ ರುಂಡ ಅ.3 ರಂದು ಪತ್ತೆಯಾಗಿದೆ. ಯಾರೋ ಕಿಡಿಗೇಡಿಗಳು ದನದ ತಲೆ ಕಡಿದು ತಲೆಯಭಾಗವನ್ನು ಇಲ್ಲಿ ಬಿಸಾಡಿ ಹೋಗಿದ್ದಾರೆ. ಸುಬ್ರಹ್ಮಣ್ಯ ಠಾಣಾಧಿಕಾರಿ ಸ್ಥಳಕ್ಕೆ ಆಗಮಿಸಿ ಮಹಜರು  ನಡೆಸಿದ್ದಾರೆ. ಸುಬ್ರಹ್ಮಣ್ಯ ಪಶು ವೈದ್ಯಾಧಿಕಾರಿ ರುಂಡದ ಪೋಸ್ಟ್ ಮಾರ್ಟಂ ನಡೆಸಿದ್ದಾರೆ. ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯ ಗಿರೀಶ್ ಆಚಾರ್ಯ ಘಟನೆಯನ್ನು ಖಂಡಿಸಿದ್ದಾರೆ.