ಸುಬ್ರಹ್ಮಣ್ಯ:ಹಿತ ಚಿಂತಕ ಅಭಿಯಾನಕ್ಕೆ ಚಾಲನೆ

0

ವಿಶ್ವ ಹಿಂದೂ ಪರಿಷತ್ ವತಿಯಿಂದ ದೇಶಾದ್ಯಂತ ನಡೆಯುತ್ತಿರುವ ಹಿತ ಚಿಂತಕ ಅಭಿಯಾನಕ್ಕೆ ನ.10 ರಂದು ಸುಬ್ರಹ್ಮಣ್ಯದಲ್ಲಿ ಚಾಲನೆ ನೀಡಲಾಯಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಮಾಸ್ಟರ್ ಪ್ಲಾನ್ ಸದಸ್ಯ ಮನೋಜ್ ಸುಬ್ರಹ್ಮಣ್ಯ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷರು ಡಾ. ಕೃಷ್ಣ ಪ್ರಸನ್ನ, ಜಿಲ್ಲಾ ಸಹ ಕಾರ್ಯದರ್ಶಿ ನವೀನ್ ನೆರಿಯ ಹಾಗೂ ಕಡಬ ಪ್ರಖಂಡ ಉಪಾಧ್ಯಕ್ಷ ಅಶೋಕ ಆಚಾರ್ಯ ಸುಬ್ರಹ್ಮಣ್ಯ ,ಕಡಬ ಪ್ರಖಂಡ ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ , ಮಾಜಿ ಪಂಚಾಯತ್ ಸದಸ್ಯರಾದ ಪ್ರಸಾದ್ ನೆಟ್ಟಣ, ವಿಶ್ವ ಹಿಂದು ಪರಿಷತ್ ಬಜರಂಗದಳ ಕುಕ್ಕೆ ಸುಬ್ರಹ್ಮಣ್ಯ ಘಟಕ ಅಧ್ಯಕ್ಷರಾದ ರಾಧಾಕೃಷ್ಣ ಆರುವಾರ, ಲಕ್ಷ್ಮೀಶ ಈಜಿನಡ್ಕ, ಕಾರ್ತಿಕ್ ಪೈಕ, ಯದುಚಂದ್ರ ಮೆರ್ಕಜೆ, ಪರಮೇಶ ಮೈಕ್ರೋ ಆರ್ಟ್ ಆದಿ ಸುಬ್ರಮಣ್ಯ, ಮಣಿ ರಾಜ ಪಿಲಿಕಜೆ, ಹೇಮಂತ್ ಕಲ್ಪಡಗುತ್ತು, ಪ್ರವೀಣ್ ಮಾಣಿಬೈಲು, ಅಶ್ವಥ್ ಕೆದಿಲ, ದೀಕ್ಷಿತ್ ಮಲಯಾಳ, ಅಶೋಕ್ ಕುಲ್ಕುಂದ, ಬಾಲಕೃಷ್ಣ ಕೈಕಂಬ, ನಿತಿನ್ ಕೆ ಎಸ್, ಶರತ್ ಕೆ ಎನ್, ಮಣಿಕಂಠ ಕುಲ್ಕುಂದ, ರವಿ ಅಂಙಣ, ಮಹೇಶ್ ಗುಡ್ಡೆಮನೆ ಮತ್ತಿತರರು ಉಪಸ್ಥಿತರಿದ್ದರು.